ಹೂವುಗಳಿಂದ ವಿನ್ಯಾಸಗೊಳಿಸಿದ ಜಿರಾಫೆ, ನವಿಲು, ಸುಖೊಯ್ ಯುದ್ಧ ವಿಮಾನ, ಹೂವಿನಿಂದ ನಿರ್ಮಿಸಲಾದ ಹೃದಯ ವಿನ್ಯಾಸ, ಹಾರ್ನ್ಬಿಲ್ ಜನರನ್ನು ಆಕರ್ಷಿಸಿದವು. ಕಾರವಾರದ ಹತ್ತಿರ ಸದಾಶಿವಗಡದ ಹಣ್ಣಿನ ವಿನ್ಯಾಸದ ಕಲಾವಿದರು ಹಣ್ಣಿನಲ್ಲಿ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗ್ಡೆ, ಪ್ರಧಾನಿ ನರೇಂದ್ರ ಮೋದಿಯವರನ್ನು ವಿನ್ಯಾಸಗೊಳಿಸಿದ್ದಾರೆ. ಅದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದೆ.