ಅಂಕಣದ ಜನಪ್ರಿಯತೆಯಿಂದಾಗಿ ರವಿ ಇದೇ ಹೆಸರಿನಲ್ಲಿ ಅದನ್ನು ಪುಸ್ತಕವಾಗಿ ಪ್ರಕಟಿಸಿದ್ದರು. ಆ ಪುಸ್ತಕ ಎರಡು ಭಾಗಗಳಲ್ಲಿ ಹೊರಬಂದಿತು. ಅದೂ ಸಹ ಬೆಸ್ಟ್ ಸೆಲ್ಲರ್ ಪುಸ್ತಕಗಳ ಸಾಲಿಗೆ ಸೇರ್ಪಡೆಗೊಂಡಿತು. ದಾವೂದ್ ಇಬ್ರಾಹಿಂ ಜೀವನ ಕುರಿತಂತೆ ಅವರ ಇನ್ನೊಂದು ಪುಸ್ತಕ ಡಿ-ಕಂಪೆನಿ, ಅಂಡರ್ ವರ್ಲ್ಡ್ ಡಾನ್ ಮುತ್ತಪ್ಪ ರೈ ಅವರೊಂದಿಗೆ ಸಂಭಾಷಣೆಗಳನ್ನು ಸಹ ಅವರು ಬರೆದಿದ್ದರು. ಪೊಲೀಸ್ ಅಧಿಕಾರಿಗಳಿಂದ ರಾಜಕಾರಣಿಗಳು, ಕುಸ್ತಿಪಟುಗಳು, ಬರಹಗಾರರು, ಗಾಯಕರು, ಹಗರಣಗಳು ಮತ್ತು ಭೂಗತ ಅಪರಾಧ, ಕ್ರೀಡೆ, ಸಾಹಿತ್ಯ ಹೀಗೆ ಅವರು ಮುಟ್ಟದ, ಬರೆಯದ ವಿಚಾರಗಳೇ ಇಲ್ಲ. ತಮ್ಮ ಪತ್ರಿಕೆಯನ್ನು ಪ್ರಕಟಿಸುವುದರಲ್ಲದೆ, ಅವರು ದೂರದರ್ಶನ ಮತ್ತು ಬೆಳ್ಳಿ ಪರದೆಯಲ್ಲಿ ಸಹ ತಮ್ಮ ಛ್ಹಾಪನ್ನು ತೋರಿದ್ದಾರೆ. ಕ್ರೈಮ್ ಡೈರಿ, ಬೆಳಗೆರೆ ಧ್ವನಿಯಲ್ಲಿ ನಿರೂಪಿತವಾದ ಅಪರಾಧ ಪ್ರಸಂಗಗಳ ಕುರಿತ ಕಾರ್ಯಕ್ರಮ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಇದು ಕನ್ನಡ ದಲ್ಲಿ ಪ್ರಸಾರವಾದ ಮೊದಲ ಅಪರಾಧ ಸಂಬಂಧಿತ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಅವರು ಗಣಿಧಣಿಗಳ ಮಾಲೀಕತ್ವದ ಖಾಸಗಿ ವಾಹಿನಿಯ ನೇತೃತ್ವ ವಹಿಸಿದ್ದರು ಆದರೆ ಶೀಘ್ರದಲ್ಲೇ ಅಲ್ಲಿಂದ ಹೊರಬಂದರು.