ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆಗೆ ಮಾತನಾಡಿದ ಎಪಿಸಿಸಿಎಫ್ ಜಯರಾಮ್, ಆನೆಗಳ ಕಾರಿಡಾರನ್ನು ನಿರ್ಮಿಸಿ ಆನೆಗಳ ಉಪಟಳವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆನೆಗಳ ಕಾರಿಡಾರ್ ಭೂಮಿ ಛಿದ್ರಗೊಂಡಿದೆ. ಆನೆಗಳ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಕಲೇಶಪುರ ಹತ್ತಿರ ಆನೆಗಳ ಶಿಬಿರ ಸ್ಥಾಪಿಸಲು ಸರ್ಕಾರ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದೆ. ವಶಕ್ಕೆ ತೆಗೆದುಕೊಂಡ ಆನೆಯನ್ನು ದುಬಾರೆ ಆನೆಗಳ ಶಿಬಿರಕ್ಕೆ ಕಳುಹಿಸಲಾಯಿತು.