‘ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್ಐ)’ ಸಂಘಟನೆಯ ನಾಲ್ಕು ಮಂದಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಾಡಿನ ಎಸ್.ಜಯಚಂದ್ರನ್, ಮುಂಬೈನ ಶಶಾಂಕ್ ದಲ್ವಿ ಅವರುಗಳು ‘ವನ್ಯಜೀವಿ ಸೇವಾ ಪ್ರಶಸ್ತಿ’ ಪಡೆದರೆ ನಿಕಿತ್ ಸುರ್ವೆ ಹಾಗೂ ವೈಶಾಲಿ ರಾವತ್ ‘ಯುವ ಪರಿಸರವಾದಿ’ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.