"ನಾನು ಮನೆಗಾಗಿ ಗದಗದ ಉಪ ಆಯುಕ್ತರಿಗೆ ಸಹ ಮನವಿ ಮಾಡಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ನನ್ನ ಹೆಂಡತಿ ಅನಾರೋಗ್ಯ ಪೀಡಿತಳಾಗಿದ್ದಾಳೆ, ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸುವುದು ನನ್ನಿಂದ ಆಗುತ್ತಿಲ್ಲ. ನನಗೆ ಮಗ ಮತ್ತು ಮಗಳು ಇದ್ದು . ನಾನು ಅವರನ್ನೆಲ್ಲಾ ಸಾಕಬೇಕಿದೆ. ಹೀಗಾಗಿ ಕಡೆಯ ಪ್ರಯತ್ನವೆನ್ನುವಂತೆ , ನಾನು ರಾಷ್ಟ್ರಪತಿಗಳಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದೇನೆ." ಮಕಂದರ್ ಹೇಳಿದರು.