ಪ್ರಕರಣದ ವಿವರ: ಏಳನೇ ತರಗತಿ ಓದಿದ್ದ ಯುವತಿ ಮನೆಯವರೊಡನೆ ಕೂಲಿ ಕೆಲಸದಲ್ಲಿ ತೊಡಗಿದ್ದಳು. ಕಳೆದ ಜೂನ್ ನಲ್ಲಿ ಶಿವಶಂಕರ್ ಆಕೆಯನ್ನು ಭೇಟಿಯಾಗಿ 'ದೆಹಲಿಯ ಅಪಾರ್ಟ್ ಮೆಂಟ್ ನಲ್ಲಿ ಸ್ವಚ್ಚತಾ ಕೆಲಸ ಕೊಡಿಸುತ್ತೇನೆ, ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಪೋಷಕರಿಗೆ ತಿಳಿಸದೆ ನನ್ನೊಂದಿಗೆ ಬಾ' ಎಂದು ಆಹ್ವಾನಿಸಿದ್ದ. ಅದನ್ನು ನಂಬಿದ ಯುವತಿ ಜೂನ್ 7ರಂದು ದೆಹಲಿಗೆ ತೆರಳಿದ್ದಳು.