ಘಟನೆ ವಿವರ: ಮಂಗಳವಾರ ರಾತ್ರಿ 11.30ರ ಸುಮಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಪಾನಮತ್ತ ಚಾಲಕರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸುತ್ತಿದ್ದಾಗ ರತನ್ ಶೆಟ್ಟಿ ಎಂಜಿ ರಸ್ತೆ ಕಡೆಯಿಂದ ಬಂದಿದ್ದಾರೆ. ಸಿಗ್ನಲ್ ದಾಟಿದ ನಂತರ ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿದ್ದಾರೆ. ಆಗ ಅಲ್ಲಿಗೆ ಆಗಮಿಸಿದ ಸಂಚಾರಿ ಪೋಲೀಸರೊಬ್ಬರು "ಪ್ರಕರಣ ದಾಖಲಿಸುತ್ತೇವೆನ್ನುವ ಭಯಕ್ಕೆ ಇಲ್ಲಿ ಕಾರ್ ನಿಲ್ಲಿಸಿದ್ದೀರಿ? ಕಾರ್ ನಿಂದ ಕೆಳಗಿಳಿಯಿರಿ ಎಂದಾಗ ಕಾರ್ ಚಾಲಕ ಹರೀಶ್ ಕೆಳಗಿಳಿದರಾದರೂ ಅಲ್ಲೇ ಮೂತ್ರ ವಿಸರ್ಜನೆಗೆ ಹೋಗಿದ್ದ ರತನ್ "ನಾವು ಯಾರ ಭಯದಿಂದ ಕಾರ್ ನಿಲ್ಲಿಸಿಲ್ಲ, ನಾನು ಮೂತ್ರ ವಿಸರ್ಜನೆಗೆ ತೆರಳಿದ್ದೆ. ಅದಕ್ಕೆ ಕಾರ್ ನಿಲ್ಲಿಸಿದ್ದೆವು" ಎಂದು ಪೋಲೀಸರೊಡನೆ ವಾದ ಹೂಡಿದ್ದಾರೆ.