ಇಷ್ಟಾಗಿ ಆರೋಪಿ ಚಿಕ್ಕಪೇಟೆಯ ಅಂಗಡಿಗೆ ತೆರಳಿ ಎಲೆಕ್ಟ್ರಿಕ್ ತಂತಿ, ವಿದ್ಯುತ್ ನಿರೋಧಕ ಗ್ಲೌಸ್ ಹಾಗೂ ಬೂಟುಗಳನ್ನು ಖರೀದಿ ನಡೆಸಿದ. ಮರದ ತುಂಡೊಂದಕ್ಕೆ ತಂತಿ ಸುತ್ತಿಕೊಂಡು ಡಿ.3ರ ಬೆಳಗ್ಗೆ ಉತ್ತರಿ ಗ್ರಾಮದ ನಿರ್ಜನ ಪ್ರದೇಶಕ್ಕೆ ತೆರಳಿದ ಆತ ವಿದ್ಯುತ್ ನಿರೋಧಕ ಉಪಕರಣಗಳನ್ನು ಧರಿಸಿಕೊಂಡು ಕಂಬ ಏರಿ ಮರದ ತುಂಡುಗಳನ್ನು ಹೈಟೆನ್ಶನ್ ವೈರ್ ಮೇಲೆ ಹಾಕಿ, ತಂತಿಯನ್ನು ಕೆಳಗೆ ಬಿಟ್ಟಿದ್ದ. ಮತ್ತೆ ಮನೆಗೆ ಮರಳಿದ ನಂತರ ಅನಿಲ್ ಗೆ ಕರೆ ಮಾಡಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಾಗಿದೆ, ಹೋಗಿ ಪರೀಕ್ಷಿಸಿ ಬರೋಣ ಎಂದು ಕರೆದೊಯ್ದಿದ್ದ.