ಅದಾಗಿ ಅವರಿಗೆ ಮತ್ತೊಮ್ಮೆ ಹಣದ ಅಗತ್ಯ ಕಂಡುಬಂದಾಗ ಅವರು ಶಾಲಾ ಶಿಕ್ಷಕಿಯ ಅಪಹರಣಕ್ಕೆ ಸಂಚು ರೂಪಿಸಿದ್ದರು. ಆಗಸ್ಟ್ 1, 2009 ರಂದು, ಶಿಕ್ಷಕಿ ಶಾಲೆಗೆ ತೆರಳುತ್ತಿದ್ದಾಗ ನರಸಿಂಹ ತನ್ನ ಸ್ನೇಹಿತನಿಂದ ಎರವಲು ತಂದ ಕಾರ್ ನಲ್ಲಿ ಅವರನ್ನು ಅಪಹರಿಸಿದ್ದನು. ಅಂದು ಬೆಳಗ್ಗೆ 7.15ಕ್ಕೆ ಶಿಕ್ಷಕಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ನರಸಿಂಹ ಅವರನ್ನು ಕಾರ್ ಹತ್ತಿಸಿಕೊಂಡ. ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅದೇ ಶಾಲೆಯ ವಿದ್ಯಾರ್ಥಿಗಳಗಿದ್ದದ್ದರಿಂದ ಶಿಕ್ಷಕಿಗೂ ಯಾವ ಅನುಮಾನವಿರಲಿಲ್ಲ. ಆದರೆ ಆಕೆ ಕಾರ್ ಏರಿದ ಬಳಿಕ ರವಿ ಅತ್ಯಾಚಾರವೆಸಗಿ ಶಿಕ್ಷಕಿಯನ್ನು ಹತ್ಯೆ ಮಾಡಿ ಅವರ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ನಂತರ ಸುಮಾರು 100 ಕಿಮೀ ದೂರ ಪಯಣಿಸಿದ ಬಳಿಕ ಮೃತದೇಹವನ್ನುಈಸೆದು ಅಪರಾಧಿಗಳು ಊರಿಗೆ ಮರಳಿದ್ದರು. ಎಂದು ನಾಗಮಂಗಲ ಡಿವೈಎಸ್ ಪಿ ಧರ್ಮೇಂದ್ರ ಘಟನೆಯ ವಿವರ ನೀಡಿದ್ದಾರೆ.