ರಾಯಚೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸ್ಥಳೀಯ ಬಿಜೆಪಿ ಮುಖಂಡನ ಬಂಧನ

ಗುರುವಾರ ಸಂಜೆ ತನ್ನ ಕಾರ್ ನಲ್ಲಿ 24 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ರಾಯಚೂರು ಸ್ಥಳೀಯ ಬಿಜೆಪಿ ಮುಖಂಡ ಈಗ ಕಂಬಿಗಳ ಹಿಂದೆ ಬಂಧಿಯಾಗಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸ್ಥಳೀಯ ಬಿಜೆಪಿ ಮುಖಂಡನ ಬಂಧನ
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸ್ಥಳೀಯ ಬಿಜೆಪಿ ಮುಖಂಡನ ಬಂಧನ
Updated on
ದೇವದುರ್ಗ ಗುರುವಾರ ಸಂಜೆ ತನ್ನ ಕಾರ್ ನಲ್ಲಿ  24 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ರಾಯಚೂರು ಸ್ಥಳೀಯ ಬಿಜೆಪಿ ಮುಖಂಡ ಈಗ ಕಂಬಿಗಳ ಹಿಂದೆ ಬಂಧಿಯಾಗಿದ್ದಾರೆ. ವಿಪರ್ಯಾಸವೆಂದರೆ ಈ ಘಟನೆ ನಡೆವ ಎರಡು ಗಂಟೆಗಳ ಮುನ್ನ ವಿಜಯಪುರದಲ್ಲಿ ನಡೆದ ದಲಿತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಇದೇ ಮುಖಂದರು ದೇವದುರ್ಗದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಆರೋಪಿ ಯಲ್ಲಪ್ಪ ಅಲ್ದಾರ್ಥಿ, ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಸಂತ್ರಸ್ತೆಯು ಬಳ್ಳಾರಿ ಜೆಲ್ಲೆ ಹೊಸಪೇಟೆಯ ಓರ್ವ ಶಿಕ್ಷಕಿಯಾಗಿದ್ದಾರೆ. ಸಂತ್ರಸ್ತೆಯು ಖಾಸಗಿ ಶಾಲೆಯೊಂದರಲ್ಲಿ ಎರಡನೇ ವರ್ಷದ ಎಂ.ಕಾಂ (ದೂರಶಿಕ್ಷಣ)  ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು ಅವರ ಸ್ನೇಹಿತರೊಬ್ಬರು ಆಕೆಗೆ ಯಲ್ಲಪ್ಪ  ಪರಿಚಯ ಮಾಡಿಸಿಕೊಟ್ಟಿದ್ದರು,  ಒಂದು ರಾತ್ರಿ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಅವರು ಆಕೆಗೆ ಒದಗಿಸಿಕೊಡಲಿದ್ದಾರೆಂದು ಸ್ನೇಹಿತರು ತಿಳಿಸಿದ್ದರು. ಹೀಗೆ ಅಲ್ದಾರ್ಥಿ ಆಕೆಗೆ ವಸತಿಯೊದಗಿಸಿ ಕೊಡುವುದಾಗಿ ಹೇಳಿದ ಬಳಿಕ ಆಕೆ ಪಂಚಾಯತ್ ಸದಸ್ಯರ ಕಾರ್ ಏರಿದ್ದರು.
ಕಾರ್ ನಾಲ್ಕು ಕಿಮೀ. ಚಲಿಸಿದ ಬಳಿಕ ದೇವದುರ್ಗದ ಹೊರಗೆ ಶಹಪುರ ರಸ್ತೆಯ ಒಂದು ಜಮೀನಿಗೆ ಪ್ರವೇಶಿಸಿತ್ತು. ಆಗ ಆರೋಪಿಯು ಆಕೆಯನ್ನು ಅತ್ಯಾಚಾರ ಮಾಡಲು ಮುಂದಾಗಿದ್ದು ಆಕೆ ಅದನ್ನು ಪ್ರತಿಭಟಿಸಿ ಕಾರ್ ಬಾಗಿಲು ತೆರೆದು ಹೊರಗೆ ಓಡಿದ್ದಳು. ನಂತರ ಅಲ್ಲೇ ಸನಿಹದಲ್ಲಿದ್ದ ಹತ್ತಿ ಗಿರಣಿಯೊಂದರ ಬಳಿ ಸಾರಿ ಅಲ್ಲಿದ್ದ ನಾಲ್ಕಾರು ವ್ಯಕ್ತಿಗಳಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ.ನಂತರ ಆಕೆಯು ದೇವದುರ್ಗ ಪೋಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು ದೂರಿನ ಆಧಾರದಲ್ಲಿ ಆರೋಪಿ ಗ್ರಾಮಪಂಚಾಯತ್ ಸದಸ್ಯರನ್ನು ಪೋಲೀಸರು ಬಂಧಿಸಿ ಎಫ್ ಐಆರ್ ದಾಖಲಿಸಿದ್ದಾರೆ.ಆರೋಪಿ ಯಲ್ಲಪ್ಪ ದೇವದುರ್ಗ ವ್ಯಾಪ್ತಿಯಲ್ಲಿ ಜನಪ್ರಿಯ ನಾಯಕನಾಗಿದ್ದರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com