ಆರೋಪಿ ಯಲ್ಲಪ್ಪ ಅಲ್ದಾರ್ಥಿ, ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಸಂತ್ರಸ್ತೆಯು ಬಳ್ಳಾರಿ ಜೆಲ್ಲೆ ಹೊಸಪೇಟೆಯ ಓರ್ವ ಶಿಕ್ಷಕಿಯಾಗಿದ್ದಾರೆ. ಸಂತ್ರಸ್ತೆಯು ಖಾಸಗಿ ಶಾಲೆಯೊಂದರಲ್ಲಿ ಎರಡನೇ ವರ್ಷದ ಎಂ.ಕಾಂ (ದೂರಶಿಕ್ಷಣ) ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು ಅವರ ಸ್ನೇಹಿತರೊಬ್ಬರು ಆಕೆಗೆ ಯಲ್ಲಪ್ಪ ಪರಿಚಯ ಮಾಡಿಸಿಕೊಟ್ಟಿದ್ದರು, ಒಂದು ರಾತ್ರಿ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಅವರು ಆಕೆಗೆ ಒದಗಿಸಿಕೊಡಲಿದ್ದಾರೆಂದು ಸ್ನೇಹಿತರು ತಿಳಿಸಿದ್ದರು. ಹೀಗೆ ಅಲ್ದಾರ್ಥಿ ಆಕೆಗೆ ವಸತಿಯೊದಗಿಸಿ ಕೊಡುವುದಾಗಿ ಹೇಳಿದ ಬಳಿಕ ಆಕೆ ಪಂಚಾಯತ್ ಸದಸ್ಯರ ಕಾರ್ ಏರಿದ್ದರು.