ಬೆಂಗಳೂರು: ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವು

ಇಬ್ಬರು ಶಾಲಾ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಕೊತ್ತನೂರು ದಿಣ್ಣೆಯಲ್ಲಿ ನಡೆದಿದೆ.
ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವು
ಕೆರೆಯಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವು
Updated on
ಬೆಂಗಳೂರು: ಇಬ್ಬರು ಶಾಲಾ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಕೊತ್ತನೂರು ದಿಣ್ಣೆಯಲ್ಲಿ ನಡೆದಿದೆ.  ಚುಂಚಲಘಟ್ಟದವರಾದ ಪುನೀತ್ ಹಾಗೂ ಹರೀಶ್ ಮೃತ ದುರ್ದೈವಿಗಳಾಗಿದ್ದು ಇಬ್ಬರೂ ಕೆರೆಯಲ್ಲಿ ಈಜಲು ಇಳಿದಿದ್ದರು ಎಂದು ಪೋಲೀಸರು ಮಾಹಿತಿ ನೀಡೀದ್ದಾರೆ.
ಇಬ್ಬರು ಬಾಲಕರೂ ಯೆಲಚೇನಹಳ್ಳಿಯ ಶಾಲೆಯೊಂದರಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಅವರ ಪೋಷಕರು ಗಾರ್ಮೆಂಟ್ ಸಂಸ್ಥೆಯಲ್ಲಿ ಕೆಲಸದಲ್ಲಿದ್ದರು. 
ಹಿಂದಿನ ದಿನ ಸಂಜೆ ಇಬ್ಬರೂ ಜೆಪಿ ನಗರದಲ್ಲಿನ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದು ತಡರಾತ್ರಿಯವರೆಗೂ ಹಿಂತಿರುಗಿರಲಿಲ್ಲ. ಮನೆಯವರು ಗಾಬರಿಗೊಂಡು ಹುಡುಕಲಾರಂಭಿಸಿದಾಗ ಕೆರೆಯ ಬಳಿ ಪುನೀತ್ ಬಟ್ಟೆಗಳು ಪತ್ತೆಯಾಗಿದೆ. ತಕ್ಷಣ ಅಗ್ನಿಶಾಮಕ ಹಾಗೂ ತುರ್ತು ಘಟಕಕ್ಕೆ ಕರೆ ಮಾಡಿದ ಸಂಬಂಧಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಾಗಿ ಅರ್ಧ ತಾಸು ಹುಡುಕಾಟದ ಬಳಿಕ ಕೆರೆಯಲ್ಲಿದ್ದ ಬಾಲಕರ ದೇಹಗಳು ಪತ್ತೆಯಾಗಿದೆ.  
ಕೋಣನಕುಂಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com