ಬೆಂಗಳೂರು: ಸಲಿಂಗಕಾಮಕ್ಕೆ ನಿರಾಕರಣೆ, ವ್ಯಕ್ತಿಯ ಭೀಕರ ಹತ್ಯೆ

ತನ್ನ ಸಹೋದ್ಯೋಗಿಯನ್ನು ಕೊಂದ ಆರೋಪದ ಮೇಲೆ ಪೋಲೀಸರು ಹೋಟೆಲ್ ಕೆಲಸಗಾರನೊಬ್ಬನನ್ನು ಬಂಧಿಸಿದ್ದಾರೆ.
ಸಲಿಂಗಕಾಮಕ್ಕೆ ನಿರಾಕರಣೆ, ವ್ಯಕ್ತಿಯ ಭೀಕರ ಹತ್ಯೆ
ಸಲಿಂಗಕಾಮಕ್ಕೆ ನಿರಾಕರಣೆ, ವ್ಯಕ್ತಿಯ ಭೀಕರ ಹತ್ಯೆ
ಬೆಂಗಳೂರು: ತನ್ನ ಸಹೋದ್ಯೋಗಿಯನ್ನು ಕೊಂದ ಆರೋಪದ ಮೇಲೆ ಪೋಲೀಸರು ಹೋಟೆಲ್ ಕೆಲಸಗಾರನೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು ಈತ ಬೆಂಗಳೂರಿನ ಮಡಿವಾಳದಲ್ಲಿರುವ ಆರೋಗ್ಯ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತನ ಸಹೋದ್ಯೋಗಿಯಾಗಿದ್ದ ಬೆನ್ನೆಗೌಡನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಇದೀಗ ಅವನ ಬಂಧನವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಮೃತ ಚೆನ್ನೇಗೌಡ ಹಾಗೂ ಆರೋಪಿ ದೇವರಾಜ್ ಇಬ್ಬರೂ ಸಲಿಂಗಕಾಮಿಗಳಾಗಿದ್ದು  ಕಳೆದ ನಾಲ್ಕು ತಿಂಗಳಿನಿಂದಲೂ ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧವಿರಿಸಿಕೊಂಡಿದ್ದರು. ಡಿ.21ರಂದು ಸಹ ದೇವರಾಜ್, ತನ್ನ ಸಹೋದ್ಯೋಗಿಯನ್ನು ಸಲಿಂಗ ಕಾಮಕ್ಕಾಗಿ ಸ್ಮಶಾನಕ್ಕೆಕರೆಸಿಕೊಂಡಿದ್ದನು. ಆದರೆ ಸ್ಮಶಾನಕ್ಕೆ ಆಗಮುಇಸಿದ ಬೆನ್ನೆಗೌಡ ಕಾಮಕೇಳಿಗೆ ನಿರಾಕರಿಸಿದ್ದಾನೆ. ಇದರಿಂದ ಕುಪಿತನಾದ ಆರೋಪಿ ಬಿಯರ್ ಬಾಟಲ್ ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಗುರುತು ಪತ್ತೆಯಾಗದಂತೆ ಹತ್ಯೆ ಮಾಡಿದ್ದನು.
ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದಾಗ ಘಟನಾ ಸ್ಥಳದಲ್ಲಿ ದೊರೆತ ಬ್ಯಾಂಕ್ ಸ್ಲಿಪ್ ಹಾಗೂ ಬಿಯರ್ ಬಾಟಲಿಗಳಿಂದ ಆರೋಪಿಯ ಸುಳಿವು ಪತ್ತೆಯಾಗಿದೆ. ಸದ್ಯ ಆರೋಪಿ ದೇವರಾಜ್ ಮಡಿವಾಳ ಪೋಲೀಸರ ವಶದಲ್ಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com