ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಜಾಗವನ್ನು ನಿರ್ಬಂಧಿಸಲಾಗುತ್ತಿದ್ದು, ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಕೆಲವು ದುಷ್ಕರ್ಮಿಗಳು ಹೊಸ ವರ್ಷಾಚರಣೆಯೆಂದು ಕುಡಿದು ಬಂದು ವೇಗದಿಂದ ವಾಹನ ಚಲಾಯಿಸುವುದು, ದಾಂಧಲೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇದರಿಂದ ಅಪಘಾತವಾದ ಪ್ರಕರಣಗಳು ಕೂಡ ಈ ಹಿಂದೆ ನಡೆದಿವೆ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿಕ್ರಮ್ ವಿ.ಅಮತೆ.