ಮೇಟಿ ಸಿಡಿ ಹಗರಣ: ಸಿಐಡಿಯಿಂದ ಅನುಪಮಾ ಶೆಣೈ, ರಾಜಶೇಖರ ಮುಲಾಲಿ ವಿಚಾರಣೆ

ಮಾಜಿ ಸಚಿವ ಎಚ್ ವೈ ಮೇಟಿ ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಸ್ಟ್ ಹೌಸ್‌‌‌ನಲ್ಲಿ ಸಿಐಡಿ ಡಿವೈಎಸ್ಪಿ ರವಿಶಂಕರ್ ಮಾಜಿ ಡಿವೈಎಸ್ ಪಿ...
ಎಚ್.ವೈ ಮೇಟಿ
ಎಚ್.ವೈ ಮೇಟಿ
Updated on

ಬೆಂಗಳೂರು: ಮಾಜಿ ಸಚಿವ ಎಚ್ ವೈ ಮೇಟಿ ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಸ್ಟ್ ಹೌಸ್‌‌‌ನಲ್ಲಿ ಸಿಐಡಿ ಡಿವೈಎಸ್ಪಿ ರವಿಶಂಕರ್ ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹಾಗೂ ಆರ್ ಟಿಐ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರ ವಿಚಾರಣೆ ನಡೆಸಿದರು.

ಪ್ರವಾಸಿ ಮಂದಿರದಲ್ಲಿ ಸಿಐಡಿ ಡಿವೈಎಸ್ಪಿ ರವಿಶಂಕರ್‌ ನೇತೃತ್ವದ ತಂಡ ಪ್ರತ್ಯೇಕವಾಗಿ ಇವರಿಬ್ಬರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಮುಲಾಲಿ ಹಾಗೂ ಅನುಪಮಾ ಅವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ. 2  ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಕಲೆಹಾಕಲಾಗಿದೆ ಎಂದು ತಿಳಿದುಬಂದಿದೆ.

ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಅನುಪಮಾ ಶೆಣೈ ಬುಧವಾರ ಇಲ್ಲಿನ ನ್ಯಾಯಾಲಯಕ್ಕೆ ಆಗಮಿಸಿದ್ದರು. ಇದನ್ನರಿತ ಸಿಐಡಿ ಅಧಿಕಾರಿಗಳು ಶೆಣೈ ಅವರ ವಿಚಾರಣೆ ನಡೆಸಿದ್ದಾರೆ.

ರಾಜಶೇಖರ್‌ ಮುಲಾಲಿ ಅವರನ್ನು 2 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಪ್ರಕರಣ ಕುರಿತು ಅಗತ್ಯ ಮಾಹಿತಿ ಪಡೆದರು. ಮಧ್ಯಾಹ್ನ 12ಕ್ಕೆ ಆರಂಭವಾದ ವಿಚಾರಣೆ 2ರವರೆಗೆ ನಡೆಯಿತು. ಸಿಐಡಿ ಡಿವೈಎಸ್ಪಿ ರವಿಶಂಕರ್‌ ಅವರು ರಾಜಶೇಖರ್‌ ಮುಲಾಲಿ ಅವರಿಗೆ ಜ.28ರಂದು ನೋಟೀಸ್‌ ನೀಡಿದ್ದರು. ಅನಿವಾರ್ಯ ಕಾರಣಗಳಿಂದ ಅವರು ಹಾಜರಾಗಿರಲಿಲ್ಲ. ಬೇರೊಂದು ದಿನ ಗೊತ್ತುಮಾಡುವಂತೆ ರಾಜಶೇಖರ್‌ ಮುಲಾಲಿ ಅವರು ಮನವಿ ಮಾಡಿದ್ದರು.

ವಿಚಾರಣೆ ನಂತರ ಸಾಮಾಜಿಕ ಕಾರ್ಯಕರ್ತ ರಾಜಶೇಖರ್‌ ಮುಲಾಲಿ ಪ್ರತಿಕ್ರಿಯಿಸಿ, 'ನಿಷ್ಠಾವಂತ ಹೋರಾಟಗಾರರನ್ನು ರಾಜ್ಯ ಸರಕಾರ ಸಿಐಡಿ ವಿಚಾರಣೆಗೆ ಒಳಪಡಿಸುವ ಮೂಲಕ ಅಗೌರವ ತೋರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಗೊತ್ತಿರುವ ಸತ್ಯ ಮತ್ತು ವಾಸ್ತವ ಸಂಗತಿಯನ್ನು ವಿವರಿಸಿರುವೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವೆ. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇರಲಿಲ್ಲ ಎಂದರು..

ಸಿಐಡಿ ವಿಚಾರಣೆ ಎದುರಿಸುವಂತೆ ಮಾಡುವ ಮೂಲಕ ರಾಜ್ಯ ಸರ್ಕಾರ  ದೊಡ್ಡದೊಂದು ಬಹುಮಾನ ನೀಡಿದೆ ಎಂದು ಆರ್‌ಟಿಐ ಕಾರ್ಯಕರ್ತ ರಾಜಶೇಖರ್‌ ಮುಲಾಲಿ ವ್ಯಂಗ್ಯವಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com