ಯುವಕನ ಮೇಲೆ ಹಲ್ಲೆ ಪ್ರಕರಣ: ಶಾಸಕ ರಾಜು ಕಾಗೆ ಬೆಂಬಲಿಗರ ಬಂಧನ

ಉದ್ಯಮಿ ವಿವೇಕ್‌ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜು ಕಾಗೆ ಅವರ ನಾಲ್ವರು ಬೆಂಬಲಿಗರನ್ನು ಕಾಗವಾಡ ...
Updated on

ಅಥಣಿ: ಉದ್ಯಮಿ ವಿವೇಕ್‌ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜು ಕಾಗೆ ಅವರ ನಾಲ್ವರು ಬೆಂಬಲಿಗರನ್ನು ಕಾಗವಾಡ ಪೋಲಿಸರು ಬಂಧಿಸಿದ್ದಾರೆ.

ಶಂಕರ ಅಮ್ಮಣ್ಣ ವಾಗಮೋಡೆ, ರವೀಂದ್ರ ಭೂಪಾಲ ನಾಗವೆ, ಮಲಗೊಂಡ ಅಪ್ಪು ಪಾಟೀಲ, ಹಾಗೂ ಸುದರ್ಶನ ಅಣ್ಣಾಸಾಬ್ ನಂದನೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ  ಶಾಸಕ ರಾಜು ಕಾಗೆ ಎಲ್ಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ್ದಾರೆಂಬ ಆರೋಪದ ಮೇರೆಗೆ ಜ.1 ರಂದು ವಿವೇಕ ಶೆಟ್ಟಿ ಮೇಲೆ ಶಾಸಕ ರಾಜು ಕಾಗೆ ಕುಟುಂಬ ಮತ್ತು ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಜ. 09 ರಂದು ಪ್ರಕರಣ ದಾಖಲಾಗಿತ್ತು. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ದೊರೆತಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com