ಪನ್ನಂಪೇಟೆ ಬಳಿ ಉರುಳಿಗೆ ಸಿಲಿಕಿದ ಹುಲಿಯ ಕಾಲಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯವಾಗಿತ್ತು. ಉರುಳಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಇತರ ಕಾಲುಗಳಿಗೂ ಗಾಯಗಳಾಗಿದ್ದವು. ಪುನರ್ವಸತಿ ಕೇಂದ್ರಕ್ಕೆ ತಂದ ಬಳಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗಾಯದ ಸೋಂಕು ದೇಹಕ್ಕೆ ವ್ಯಾಪಿಸಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ’ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.