ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯದ ಮಾದರಿಯಲ್ಲಿ ಕೂಡಲ ಸಂಗಮವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, 139 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿದ್ದು, ಕೃಷ್ಣ ಭಾಗ್ಯ ಜಲ ನಿಗಮ್ ಲಿಮಿಟೆಡ್ ಮೂಲಕ ಇದನ್ನು ಜಾರಿಗೊಳಿಸಲಾಗುತ್ತದೆ. ಬಸವ ಅಂತಾರಾಷ್ಟ್ರೀಯ ಕೇಂದ್ರ, ಯಾತ್ರಾರ್ಥಿಗಳಿಗೆ ಚತ್ರ ನಿರ್ಮಿಸುವುದು, ಕಲ್ಯಾಣ ಮಂಟಪ, ಮಿನಿ ಥಿಯೇಟರ್, ವಿಜಯಪುರ ಜಿಲ್ಲೆಯ ಕೂಡಲ ಸಂಗಮದ ಬಳಿ ಓರಿಯಂಟೇಷನ್ ಸೆಂಟರ್ ನಿರ್ಮಿಸುವುದು ಯೋಜನೆಯ ಭಾಗವಾಗಿದೆ.