ಬೆಟ್ಟದ ಮೇಲಿರುವ 21 ಶಿವಲಿಂಗಗಳಲ್ಲಿ ಹೆಚ್ಚಿನ ಸಂಖ್ಯೆಯ ಲಿಂಗಗಳನ್ನು ಕಬ್ಬಿಣದ ರಾಡಿನಿಂದ ಹೊಡೆದು ಮುರಿಯಲಾಗಿದೆ. ಲಿಂಗಗಳಿಗೆ ಹಾನಿಯಾಗಿರುವುದು ಪತ್ರಕರ್ತರು ಮತ್ತು ನಡಿಗೆದಾರರ ಗಮನಕ್ಕೆ ಬಂದಿದೆ. ಇಡಿ ಧವಳಪ್ಪನಗುಡ್ಡ ನಿಧಿಗಳ್ಳರಿಗೆ ಸ್ವರ್ಗವಾಗಿದೆ, ಚಂದ್ರವಳ್ಳಿ ಪ್ರದೇಶಕ್ಕೆ ಕಾವಲು ಹಾಕಲಾಗಿದೆ, ಹೀಗಿರುವಾಗ ನಿಧಿಗಳ್ಳರು ಹೇಗೆ ಇಲ್ಲಿಗೆ ಪ್ರವೇಶಿಸುತ್ತಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.