ಸಿಎಂ ಸಿದ್ದರಾಮಯ್ಯ ಸೋಮವಾರ ಎಲ್ಲಿ ಪರಿಶೀಲನಾ ಸಭೆ ಏರ್ಪಡಿಸಿದ್ದರು ಎಂಬುದನ್ನು ಆಕೆಗೆ ಪ್ರಶ್ನಿಸಿ ಎಂದು ಮಾಧ್ಯಮದವರಿಗೆ ಸತ್ಯನಾರಾಯಣ ರಾವ್ ಹೇಳಿದ್ದಾರೆ, ಇನ್ನೂ 2 ಕೋಟಿ ರು. ಲಂಚದ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಹಣದ ವಿಷ ಬಿಡಿ, ಅವರಿಗೆ ಕಾನೂನಿನಿಂದ ಒಂದು ಸಣ್ಣ ರಿಲ್ಯಾಕ್ಷೇಷನ್ ಕೂಡ ನೀಡಿಲ್ಲ, ಅವರನ್ನು ಭೇಟಿ ಮಾಡುವವರ ನಿಯಮದಲ್ಲಿ ಸಣ್ಣ ಬದಲಾವಣೆ ಕೂಡ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ನಾನು ಜೈಲಿಗೆ ಭೇಟಿ ನೀಡಲು ಮಾತ್ರ ಆಕೆಗೆ ಅಧಿಕಾರ ನೀಡಿದ್ದೇನೆ, ಇದರಲ್ಲ ಮುಚ್ಚು ಮರೆ ಮಾಡುವಂತದ್ದು ಏನು ಇಲ್ಲ, ಎಂದು ಹೇಳಿದ್ದಾರೆ.