ಉಡುಪಿ: ಸೈನೈಡ್ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಬೆಳ್ಳೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉಡುಪಿ : ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ  ಶಿರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಬೆಳ್ಳೆಯಲ್ಲಿ ನಡೆದಿದೆ.
ಶಂಕರ ಆಚಾರ್ಯ(51) ಪತ್ನಿ ನಿರ್ಮಲ ಆಚಾರ್ಯ( 45) ಮಕ್ಕಳಾದ ಶ್ರುತಿ(25) ಮತ್ತು ಶ್ರೇಯ( 22) ಆತ್ಮಹತ್ಯೆಗೆ ಶರಣಾದವರು. 
ಶಂಕರ್ ಆಚಾರ್ಯ ಅವರು ಪಡುಬೆಳ್ಳೆಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿದ್ದರು. ಶೃತಿ ಎಂಬಿಎ ಪಧವೀಧರೆಯಾಗಿದ್ದು, ಶ್ರೇಯಾ ಎಂಸಿಎ ಓದುತ್ತಿದ್ದಳು. 
ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂದಿಗಳಿಂದ ಪ್ರಕರಣ ಬಯಲಾಗಿದ್ದು, ಕಸ್ತೂರ ಬಾ ಆಸ್ಪತ್ರೆಗೆ ಶವಗಳನ್ನು  ರವಾನಿಸಲಾಗಿದೆ.
ಶೃತಿಗೆ ವಿವಾಹ ನಿಶ್ಚಯವಾಗಿದ್ದು, ಸೆಪ್ಟಂಬರ್ 5 ರಂದು ದಿನಾಂಕ ನಿಗದಿಯಾಗಿತ್ತು. ಗುರುವಾರ ಅವರು ಮದುವೆಗಾಗಿ ಛತ್ರ ಬುಕ್ ಮಾಡಿಸಲು ಯೋಜಿಸಿದ್ದರು. ವಿಷವನ್ನು ಆಹಾರದಲ್ಲಿ ಬೆರೆಸಿ ತಿಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರ ಮನೆಯಲ್ಲಿ ಅನ್ನ ಸಾರು ಇದ್ದ ತಟ್ಟೆ ಪತ್ತೆಯಾಗಿದೆ. ಬೆಳಗ್ಗೆ 6 ರಿಂದ 8 ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ, ಯಾವುದೇ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ, ಈ ಸಂಬಂಧ  ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com