ಬೆಂಗಳೂರು: ಕೇಂದ್ರ ಕಾರಾಗೃಹದಲ್ಲಿ ಚಿನ್ನಮ್ಮನ ರಾಜ ದರ್ಬಾರ್

ಪರಪ್ಪನ ಅಗ್ರಹಾರದಲ್ಲಿರುವ ಜೈಲು ಅಧಿಕಾರಿಯ ಅಧಿಕೃತ ಕೊಠಡಿ ಎಐಎಡಿಎಂಕೆ ನಾಯಕಿ ಶಶಿಕಲಾ ನೋಡಲು ಬರುವ ವಿಸಿಟರ್ಸ್ ಗಳ ಅತಿಥಿ ...
ಶಶಿಕಲಾ
ಶಶಿಕಲಾ
Updated on
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಜೈಲು ಅಧಿಕಾರಿಯ ಅಧಿಕೃತ ಕೊಠಡಿ ಎಐಎಡಿಎಂಕೆ  ನಾಯಕಿ ಶಶಿಕಲಾ ನೋಡಲು ಬರುವ ವಿಸಿಟರ್ಸ್ ಗಳ ಅತಿಥಿ ಗೃಹವಾಗಿದೆ ಎಂದು ಉನ್ನತ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ.
ಈ ಕೊಠಡಿಯಲ್ಲಿ 8 ಕುರ್ಚಿಗಳಿದ್ದು, ಶಶಿಕಲಾ ಭೇಟಿ ಮಾಡಲು ಬರುವ ಉನ್ನತ ವ್ಯಕ್ತಿಗಳ ಮೀಟಿಂಗ್ ಹಾಲ್ ಆಗಿ ಪರಿವರ್ತಿತವಾಗಿದೆ. ಈ ಕೊಠಡಿಯನ್ನು ಬಳಸುತ್ತಿದ್ದ ಅಧಿಕಾರಿ ಇತ್ತೀಚೆಗೆ ನಿವೃತ್ತರಾದ ಹಿನ್ನೆಲೆಯಲ್ಲಿ, ಅದನ್ನು ಮೀಟಿಂಗ್ ಹಾಲ್ ಆಗಿ ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕೊಠಡಿಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಜೊತೆಗೆ ಕೊಠಡಿ ಹೊರಗೆ ಭದ್ರತಾ ಸಿಬ್ಬಂದಿಯೂ ಇರುವುದಿಲ್ಲ, ಪ್ರತಿದಿನ ಶಶಿಕಲಾರನ್ನು ನೋಡಲು ಹಲವರು ಬರುತ್ತಾರೆ. ಅದರಲ್ಲಿ ತಮಿಳುನಾಡಿನ ಪ್ರಮುಖ ಸಚಿವರು ಹಾಗೂ ಗಣ್ಯ ರಾಜಕಾರಣಿಗಳು ಇರುತ್ತಾರೆ.
ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಲು ಬಂದಾಗ ಅಲ್ಲಿ ಒಂದು ಜಾಲರಿ(ಮೆಸ್) ಇರುತ್ತದೆ. ಕೈದಿಗಳು ಮತ್ತು ವಿಸಿಟರ್ಸ್ ಪರಸ್ಪರ ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ, ಆದರೆ ಶಶಿಕಲಾ ಭೇಟಿ ಮಾಡಲು ವ್ಯವಸ್ಥೆಯಾಗಿರುವ ಕೊಠಡಿಯಲ್ಲಿ ಅಂತ ಸಮಸ್ಯೆಯಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com