ನಾನು ಕಾರಾಗೃಹ ಇಲಾಖೆ ಅಧಿಕಾರಿಯಾಗಿದ್ದಾಗ ಆಗಾಗ್ಗೆ ಸರ್ ಪ್ರೈಸ್ ವಿಸಿಟ್ ನೀಡುತ್ತಿದ್ದೆ. ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ಹಾಗೂ ಜೈಲು ಸೂಪರಿಂಡೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ, ಜೈಲಿನಲ್ಲಿ ತರಕಾರಿಯನ್ನು ಮತ್ತೊಬ್ಬ ಕೈದಿಗೆ ಮಾರಾಟ ಮಾಡುತ್ತಿದ್ದುದ್ದ ಬಗ್ಗೆ ವಿವರವಾದ ವರದಿ ನೀಡಿದ್ದೆ. ಆದರೆ ಜೈಲು ಅಧಿಕಾರಿ ಇವುಗಳನ್ನು ತಡೆಯಲು ವಿಫಲರಾದರು. ಯಾರೋಬ್ಬರನ್ನು ಅಮಾನತುಗೊಳಿಸಲಿಲ್ಲ ಅಥವಾ ಕರ್ತವ್ಯದಿಂದ ವಜಾಗೊಳಿಸಲಿಲ್ಲ, ಆದರೆ ನಂತರ, ಆ ಅಧಿಕಾರಿ ವಯಕ್ತಿಕ ಕಾರಣದಳಿಂದಾಗಿ ಆತ್ಮಹತ್ಯೆಗೆ ಶರಣಾದರು ಎಂದು ಅಧಿಕಾರಿ ತಿಳಿಸಿದ್ದಾರೆ.