ಶಶಿಕಲಾ ಭೇಟಿಗೆ ಬಂದ ದಿನಕರನ್: ಅವಕಾಶ ನೀಡದೇ ವಾಪಸ್ ಕಳುಹಿಸಿದ ಜೈಲು ಸಿಬ್ಬಂದಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಎಐಎಡಿಎಂಕೆ ನಾಯಕಿ ಶಶಿಕಲಾ ..
ಬೆಂಬಲಿಗರೊಂದಿಗೆ ಆಗಮಿಸಿದ್ದ ಟಿಟಿವಿ ದಿನಕರನ್
ಬೆಂಬಲಿಗರೊಂದಿಗೆ ಆಗಮಿಸಿದ್ದ ಟಿಟಿವಿ ದಿನಕರನ್
Updated on
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.  ಎಐಎಡಿಎಂಕೆ ನಾಯಕಿ ಶಶಿಕಲಾ ಅವರನ್ನು ಭೇಟಿ ಮಾಡಲು ಅವರ ಸಂಬಂಧಿ ಟಿಟಿವಿ ದಿನಕರನ್  ಆಗಮಿಸಿದ್ದರು. 
ಈ ವೇಳೆ ಶಶಿಕಲಾ ಭೇಟಿ ಮಾಡಲು ದಿನಕರನ್ ಗೆ ಅವಕಾಶ ನೀಡಲು ಜೈಲು ಸಿಬ್ಬಂದಿ ನಿರಾಕರಿಸಿದರು. ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ದಿನಕರನ್ ಶಶಿಕಲಾ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕಲ್ಪಿಸಿಲ್ಲ, ಆರೋಪಗಳೆಲ್ಲವೂ ನಿರಾಧಾರ ಎಂದು ಹೇಳಿದರು.
ಮಧ್ಯಾಹ್ನದ ವೇಳೆಗೆ ತಮ್ಮ ಬೆಂಬಲಿಗರೊಂದಿಗೆ ಜೈಲಿಗೆ ಬಂದಿದ್ದ ದಿನಕರನ್ ಶಶಿಕಲಾ ಭೇಟಿ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಜೈಲಿನ ಸಮೀಪದ ಚೆಕ್ ಪೋಸ್ಟ್ ಬಳಿಯೇ ಅವರನ್ನು ತಡೆದ ಅಧಿಕಾರಿಗಳು ಭೇಟಿ ಮಾಡಲು ಅವಕಾಶ ನೀಡದೇ ವಾಪಸ್ ಕಳುಹಿಸಿದರು.
ಈ ವೇಳೆ ದಿನಕರನ್ ಬೆಂಬಲಿಗರು ಜೈಲು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ, ಹಿರಿಯ ರಾಜಕಾರಣಿಗಳಿಗೆ ಕರೆ ಮಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.  ಆದರೆ ಅಂತಿಮವಾಗಿ  ಶಶಿಕಲಾ ಭೇಟಿ ಮಾಡಲು ಸಾಧ್ಯವಾಗದೇ ದಿನಕರ್ ವಾಪಸ್ ತೆರಳಿದರು.
ಶಶಿಕಲಾ ಭೇಟಿ ಮಾಡಲು ದಿನಕರನ್ ಮುಂಚಿತವಾಗಿ ಅನುಮತಿ ಪಡೆದಿರಲಿಲ್ಲ ಹೀಗಾಗಿ ಅವರ ಭೇಟಿಗೆ ಅವಕಾಶ ಕಲ್ಪಿಸಲಾಗಲಿಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com