ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಉಪ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ತಿಂಗಳ ಹಿಂದೆ, ತಮ್ಮ ಸ್ನೇಹಿತರೊಬ್ಬರು ಅವರ 70ನೇ ಜನ್ಮ ದಿನಾಚರಣೆಗೆ ಟ್ರಕ್ ತುಂಬಾ ಪುಷ್ಪಗುಚ್ಛ ಸಿಕ್ಕಿತ್ತು ಎಂದು ಹೇಳಿದ್ದರು. ಆಗ ನನಗೆ ಯೋಚನೆ ಬಂತು, ಪುಷ್ಪಗುಚ್ಛದ ಬದಲಿಗೆ ಅತಿಥಿಗಳಿಗೆ ಖಾದಿಯ ಕೈ ವಸ್ತ್ರವನ್ನು ಕೊಟ್ಟರೆ ಹೇಗೆ ಎಂದೆನಿಸಿತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮುಂದೆ ಪ್ರಸ್ತಾಪವಿಟ್ಟಾಗ ಅವರು ಅದನ್ನು ಒಪ್ಪಿಕೊಂಡರು ಎಂದು ಹೇಳಿದರು.