ಬೆಂಗಳೂರಿನ ಮಹದೇವಪುರದ ನಿವಾಸಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಧನಿಕ್ ಲಾಲ್ ಯಾದವ್ ಕಳೆದ ತಿಂಗಳು 25ರಂದು ತಮ್ಮ ಪತ್ನಿ ಜೊತೆ ಕೆ.ಆರ್.ಪುರಂ ರೈಲು ನಿಲ್ದಾಣಕ್ಕೆ ಊರಿಗೆ ಹೋಗಲು ರೈಲು ಟಿಕೆಟ್ ಬುಕ್ ಮಾಡಲು ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಕೌಂಟರ್ ನಲ್ಲಿ ಕಾಯುತ್ತಿದ್ದಾಗ ಇಬ್ಬರು ಅನಾಮಿಕ ವ್ಯಕ್ತಿಗಳು ಧನಿಕ್ ಹತ್ತಿರ ಬಂದು 400 ವರ್ಷಗಳಷ್ಟು ಹಳೆಯ ನಾಣ್ಯವಿದು. ನಮ್ಮಲ್ಲಿ ಇಂತಹ ಹಲವು ನಾಣ್ಯಗಳು ಮತ್ತು 7 ಕೆಜಿ ಚಿನ್ನಾಭರಣಗಳಿವೆ, ಕಡಿಮೆ ಬೆಲೆಗೆ ನೀಡುತ್ತೇವೆ ತೆಗೆದುಕೊಳ್ಳಿ ಎಂದು ದುಂಬಾಲು ಬಿದ್ದರು.