ಮಳೆ ಕೊರತೆ, ಬೀಜ ಬಿತ್ತನೆ ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗಿರುವುದು ತರಕಾರಿಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.ಬೆಳಗಾವಿ, ಕೋಲಾರಗಳಿಂದ ಟೊಮ್ಯಾಟೊ ಮಾರುಕಟ್ಟೆಗೆ ಬರಲಾರಂಭಿಸಿದರೆ ಬೆಲೆ ಕಡಿಮೆಯಾಗಬಹುದು ಎನ್ನುತ್ತಾರೆ ಅವರು. ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮಧ್ಯವರ್ತಿಗಳು, ತರಕಾರಿ, ಧವಸ ಧಾನ್ಯಗಳು, ಅಕ್ಕಿ ಬೇಳೆಕಾಳುಗಳ ಬೆಲೆ ಹೆಚ್ಚಾದಾಗ ಜನರು ನಮ್ಮನ್ನು ದೂರುತ್ತಾರೆ. ಬೆಲೆ ಹೆಚ್ಚಾಗಲು ನಾವು ಕಾರಣ ಎನ್ನುತ್ತಾರೆ. ಅನೇಕ ಚಿಲ್ಲರೆ ಮಾರಾಟಗಾರರು ಕ್ರೆಡಿಟ್ ಮೇಲೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ತರಕಾರಿಗಳನ್ನು ವಿತರಣೆ ಮಾಡಲು ನಾವು ಕಾರ್ಮಿಕರ ವೇತನವನ್ನು ನೀಡುತ್ತೇವೆ. ಬಾಸ್ಕೆಟ್ ವೊಂದಕ್ಕೆ ನಮಗೆ 50ರಿಂದ 60 ರೂಪಾಯಿ ಲಾಭ ಸಿಗುತ್ತದೆಯಷ್ಟೆ ಎನ್ನುತ್ತಾರೆ.