ಘಟನೆ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಬಾಲಕೃಷ್ಣ ರೈ, ಮೆಜೆಸ್ಟಿಕ್ ಗೆ ಬೆಳಗ್ಗೆ 9.15ಕ್ಕೆ ತಲುಪುವ ರೈಲಿನಲ್ಲಿ ನಾನಿದ್ದೆ. ಇಳಿದು ತಿರುಗುವಷ್ಟರಲ್ಲಿ, ಓರ್ವ ವೇಗವಾಗಿ ನನ್ನನ್ನು ನೂಕಿದ. ರಭಸಕ್ಕೆ ನಾನು ಕೆಳಗೆ ಬಿದ್ದೆ. ಹಿಪ್ ಜಾರಿದ್ದರಿಂದ ತಲೆತಿರುಗಿತು. ನಂತರ ಮೆಟ್ರೊ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ವೀಲ್ ಚೇರ್ ನಲ್ಲಿ ಕೂರಿಸಿ ಆಂಬ್ಯುಲೆನ್ಸ್ ಗೆ ವ್ಯವಸ್ಥೆ ಮಾಡಿದರು. ಇಬ್ಬರು ಸಹ ಪ್ರಯಾಣಿಕರು ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದರು ಎಂದು ನೆನೆಸಿಕೊಂಡರು.