ಬೆಳಗಾವಿ: ನಿಧಿ ಭೇಟೆಗಾರರ ಹಾವಳಿಗೆ ಬಲಿಯಾಯ್ತು 1,200 ವರ್ಷಗಳ ಪುರಾತನ ದೇವಾಲಯ

ಉತ್ತರ ಕರ್ನಾಟಕದ ಹಂಪಿ ಎಂದೇ ಪ್ರಸಿದ್ಧವಾಗಿರುವ ಹೂಳಿಯಲ್ಲಿ 9 ಮತ್ತು 12 ನೇ ಶತಮಾನದ ಹಲವಾರು ದೇವಾಲಯಗಳಿವೆ. ...
ಹಾನಿಗೊಳಗಾಗಿರುವ ಗಣೇಶ ದೇವಾಲಯ
ಹಾನಿಗೊಳಗಾಗಿರುವ ಗಣೇಶ ದೇವಾಲಯ
Updated on
ಬೆಳಗಾವಿ: ಉತ್ತರ ಕರ್ನಾಟಕದ ಹಂಪಿ ಎಂದೇ ಪ್ರಸಿದ್ಧವಾಗಿರುವ ಹೂಳಿಯಲ್ಲಿ 9 ಮತ್ತು 12 ನೇ ಶತಮಾನದ ಹಲವಾರು ದೇವಾಲಯಗಳಿವೆ. ಆದರೆ ಹಂಪಿಗೆ ಸಿಕ್ಕಿರುವ ವಿಶ್ವ ಪಾರಂಪರಿಕ ಸ್ಥಳಗಳ ಸ್ಥಾನಮಾನ ಇದಕ್ಕೆ ಸಿಗದ ಕಾರಣ ಇಲ್ಲಿನ ಹಲವು ದೇವಾಲಯಗಳು ನಿಧಿಗಳ್ಳರ ದುರಾಸೆಗೆ ಬಲಿಯಾಗುತ್ತಿವೆ.
ಬೆಳಗಾವಿಯ ಸೌಂದತ್ತಿಯ ಬಳಿ ಪುರಾತನ ಗ್ರಾಮದಲ್ಲಿ ಹಲವಾರು ದೇವಾಲಯಗಳಿವೆ. ಕಳೆದ ವಾರ 9ನೇ ಶತಮಾನದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಗಣೇಶ ದೇವಾಲಯವನ್ನು ನಿಧಿಗಳ್ಳರು ನಾಶ ಮಾಡಿದ್ದಾರೆ. ಹೂಳಿಯಲ್ಲಿರುವ ದೇವಾಲಯದಲ್ಲಿ ಚಿನ್ನ ಅವಿತಿಡಲಾಗಿದೆ ಎಂಬ ಕಲ್ಪನೆಯಲ್ಲಿ ದೇವಾಲಯದ ತಳಭಾಗದಲ್ಲಿ ಹೊಂಡ ತೋಡಲಾಗಿದೆ. ಹೂಳಿಯಲ್ಲಿರುವ ಎಲ್ಲಾ ದೇವಾಲಯಗಳಿಗೂ ಇದೇ ಸ್ಥಿತಿ ಎದುರಾಗಲಿದೆ.
ಯಲ್ಲಮ್ಮ ಬೆಟ್ಟದ ಮೇಲೆ  ಗಣೇಶ ದೇವಾಲಯವಿತ್ತು. ಸೌಂದತ್ತಿಯ ಪ್ರಸಿದ್ದ ಎಲ್ಲಮ್ಮ ದೇವಾಲಯದಿಂದ 2 ಕಿಮೀ ದೂರದ ಬೆಟ್ಟದಲ್ಲಿ ಗಣೇಶ ಮಂದಿರವಿತ್ತು. ಇಲ್ಲಿರುವ ಇತರ ಸ್ಮಾರಕಗಳಿಗೆ ಯಾವುದೇ ರಕ್ಷಣೆಯಿಲ್ಲದೇ ನಿಧಿ ಗಳ್ಳರ ಹಾವಳಿಗೆ ಒಳಗಾಗುತ್ತಿವೆ. 
ಸೌಂದತ್ತಿಗೆ ಬರು ಭಕ್ತರು ಎಲ್ಲಮ್ಮ ದೇವಿ ದರ್ಶನ ಪಡೆದು ಗಣೇಶ ದೇವಾಲಯಕ್ಕೂ ಕೂಡ ಆಗಮಿಸುತ್ತಿದ್ದರು. ಆದರೆ ಗಣೇಶ ದೇವಾಲಯ ಹಲವು ಕಾಲದಿಂದ ಶಿಥಿಲಗೊಂಡಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗಣೇಶ ದೇವಾಲಯ ನಾಶಗೊಂಡಿರುವುದರಿಂದ ಭಕ್ತರು ಅಸಮಾಧಾನ ಗೊಂಡಿದ್ದಾರೆ. ಇನ್ನುಳಿದ ಸ್ಮಾರಕಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಲ್ಲಮ್ಮ ದೇವಾಲಯದ ಮ್ಯಾನೇಜ್ ಮೆಂಟ್ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ ಹೇಳಿದ್ದಾರೆ.
ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇವೆ, ಎಂಜಿನೀಯರ್ ಸ್ಥಳಕ್ಕೆ ಭೇಟಿ ನೀಡಿದ್ದು, ನಿರ್ಮಾಣಕ್ಕಾಗಿ ಬೇಕಾಗುವ ಅಂದಾಜು ವೆಚ್ಚದ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. 
ಬಾದಾಮಿ - ಐಹೊಳೆ ನಂತರ ಹೂಳಿ ಕರ್ನಾಟಕದ ಮತ್ತೊಂದು ಪುರಾತನ ಸ್ಮಾರಕಗಳಿರುವ ಗ್ರಾಮವಾಗಿದೆ, ಹಲವು ದೇವಾಲಯಗಳು ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಇವುಗಳಿಗೆ ಎಎಸ್ಐ ಮಾನ್ಯತೆ ದೊರಕಿಲ್ಲ ಎಂದು ಹೇಳಿದ್ದಾರೆ.
ಗ್ರಾಮಸ್ಥರ ಪ್ರಕಾರ ಹೂಳಿಯಲ್ಲಿ 101 ದೇವಾಲಯ, 101 ಬಾವಿಗಳು, ಹಾಗೂ 101 ಸ್ಮಾರಗಳಿವೆಯಂತೆ.ಈ ದೇವಾಲಯಗಳ ಕೆಳಗೆ ರಾಜ ಚಿನ್ನ, ವಜ್ರ ಮುಂತಾದ ಸಂಪತ್ತುಗಳನ್ನು ಹೂಳಿದ್ದಾನೆ ಎಂಬ ಕಥೆಗಳು ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತವೆ. ಹೀಗಾಗಿ ಹೂಳಿ ನಿಧಿಗಳ್ಳರಿಗೆ ಸ್ವರ್ಗವಾಗಿ ಪರಿಣಮಿಸಿದೆ. ಕೆಲವು ಸ್ಮಾರಕಗಳ ಬಳಿ ಸುಮಾರು 10 ಅಡಿಗೂ ಹೆಚ್ಚು ಹಳ್ಳ ತೋಡಲಾಗಿದೆ. ರಾತ್ರಿ ಸಮಯದಲ್ಲಿ ಈ ಪ್ರದೇಶಗಳಲ್ಲಿ ಯಾರೋಬ್ಬರ ಸಂಚಾರವಿಲ್ಲದಿರುವ ಕಾರಣ ನಿಧಿಗಳರು ಆ ಸಮಯದಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. 
ಹೂಳಿಯ ಹಲವು ಸ್ಥಳಗಳಲ್ಲಿ ಇದುವರೆಗೂ ಸುಮಾರು 15 ಹಳ್ಳ ತೋಡಲಾಗಿದೆ. ಈ ಪುರಾತನ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳುತ್ತಿಲ್ಲ, ಈ ಸ್ಥಳಗಳನ್ನು ರಕ್ಷಿಸಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದೇವಾಲಯಗಳ ಗ್ರಾಮವೆಂದೇ ಪ್ರಸಿದ್ಧವಾಗಿರುವ ಹೂಳಿ ಹೆಸರು ಹೂವಳ್ಳಿ, ಇಲ್ಲಿ ಪ್ರಸಿದ್ಧ ಪಂಚಲಿಂಗೇಶ್ವರ ಮತ್ತು ತ್ರಿಕೂಟೇಶ್ವರ ದೇವಾಲಯಗಳಿವೆ. ಇಲ್ಲಿರುವ 101 ದೇವಾಲಯಗಳಲ್ಲೂ  ಬಾವಿಗಳಿವೆ. ಚಾಲಕ್ಯರ ಅವಧಿಯಲ್ಲಿ ಇವೆಲ್ಲಾ ನಿರ್ಮಿತವಾಗಿವೆ ಎಂಬುದು ಶಾಸನಗಳಿಂದ ತಿಲಿದು ಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com