ವೀಕೆಂಡ್ ಮಸ್ತಿಗಾಗಿ ಆರು ಮಂದಿ ಯುವಕರ ಗುಂಪು ಮೂರು ಬೈಕ್ ನಲ್ಲಿ ನಂದಿ ಬೆಟ್ಟಕ್ಕೆ ತೆರಳುತ್ತಿದ್ದು ಈ ವೇಳೆ ದೇವನಹಳ್ಳಿಯ ಕುಂದನ ರಸ್ತೆ ಬಳಿ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರು ಗಾಳಿಯಲ್ಲಿ ತೂರಿ ಕೆಳಕ್ಕೆ ಬಿದ್ದಿದ್ದಾರೆ. ಇದರಲ್ಲಿ ಬೈಕ್ ನ ಹಿಂದೆ ಕುಳಿತ್ತಿದ್ದ ಯುವಕ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಗಂಭೀರ ಗಾಯಗಳಿಂದ ನರಳುತ್ತಿದ್ದ. ಅಪಘಾತ ಬಳಿಕ ನಾವು ಆ್ಯಂಬುಲೆನ್ಸ್ ಗೆ ಕರೆ ಮಾಡಿದೆವು. ಆಗ ಅವರ 20 ನಿಮಿಷದಲ್ಲಿ ಬರುವುದಾಗಿ ಹೇಳಿ ಒಂದು ಗಂಟೆ ತಡವಾಗಿ ಬಂದರು ಎಂದು ಮೃತ ಯುವಕರ ಸ್ನೇಹಿತ ಶಬ್ಬೀರ್ ಹೇಳಿದ್ದಾನೆ.