ಎಫ್ ಕೆಸಿಸಿಐ ನಡೆಸಿದ ವ್ಯಾಪಾರ ಸ್ಪರ್ಧೆಯಲ್ಲಿ ಈ ಮಾದರಿಗೆ ಮೊದಲ ಬಹುಮಾನ 1.5 ಲಕ್ಷ ರೂಪಾಯಿ ಸಿಕ್ಕಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ವೇಣು, ನಾನು ಹಳ್ಳಿಯಿಂದ ಬಂದವನು. 7ನೇ ತರಗತಿಯಲ್ಲಿದ್ದಾಗ ಬೆಂಗಳೂರಿಗೆ ಬಂದೆವು. ನಗರದಲ್ಲಿ ಅನೇಕ ಹಣ್ಣು, ತರಕಾರಿ ವ್ಯಾಪಾರಿಗಳು ಪದಾರ್ಥಗಳು ಹಾಳಾಗದಂತೆ ಇಡಲು ಹರ ಸಾಹಸ ಪಡುತ್ತಾರೆ. ನಂತರ ಹಾಳಾಗಿ ಹೋಗುತ್ತದೆ.