ವಿರೋಧ ಪಕ್ಷದ ಆಕ್ರಮಣವಾದ ಡೈರಿ ವಿವಾದ, ಸ್ಟೀಲ್ ಮೇಲ್ಸೇತುವೆ, ಪಶ್ಚಿಮ ಘಟ್ಟಗಳ ಜೀವ ಸಮತೋಲನ ಕಾಪಾಡುವ ಕಸ್ತೂರಿ ರಂಗನ್ ಸಮಿತಿ ವರದಿ ಮತ್ತು ಬಡ್ತಿಯಲ್ಲಿ ಎಸ್ಸಿ ಮತ್ತು ಎಸ್ಟಿ ನೌಕರರಿಗೆ ಮೀಸಲಾತಿಯನ್ನು ರದ್ದುಪಡಿಸುವ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಇವುಗಳನ್ನು ಮೀರಿ ಜನಪರ ಜನಪ್ರಿಯ ಬಜೆಟ್ ಮಂಡನೆ ಕುರಿತು ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.