ಕೆಂಪೇಗೌಡ ಮೆಟ್ರೊ ಸ್ಟೇಷನ್ ಮತ್ತು ಮಂತ್ರಿ ಸ್ಕ್ವೇರ್ ನಡುವೆ ಸುರಂಗ ಕಾಮಗಾರಿಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೊ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪರಿಶೀಲನಾ ಸಭೆ ನಡೆಸಿದ್ದು ಏಪ್ರಿಲ್ 1 5ರ ಹೊತ್ತಿಗೆ ಕಾಮಗಾರಿ ಮುಗಿಸುವಂತೆ ಹೇಳಿದ್ದಾರೆ. ಸಂಪಿಗೆ ರಸ್ತೆಯಿಂದ ಯೆಲಚೇನಹಳ್ಳಿ ಮಧ್ಯೆ ಉತ್ತರ-ದಕ್ಷಿಣ ಕಾರಿಡಾರ್, ಸುರಂಗ ಕಾಮಗಾರಿ ಸಂಪೂರ್ಣವಾಗದಿರುವುದರಿಂದ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಿದರು.