ಕನ್ನಡದ ವಿವಾದಾತ್ಮಕ ಕಾದಂಬರಿ 'ದುಂಡಿ'ಯ ಲೇಖಕರಾಗಿರುವ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ನಿನ್ನೆ ದಾವಣಗೆರೆಯಲ್ಲಿ ಅಪರಿಚಿತ ವ್ಯಕ್ತಿಗಳು ಕಪ್ಪು ಬಣ್ಣದ ಶಾಯಿಯನ್ನು ಬಳಿದಿದ್ದರು. ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಗೆ ಚಹಾ ಸೇವಿಸಲು ಬಂದಿದ್ದ ವೇಳೆ ಯೋಗೇಶ್ ಅವರ ಮುಖಕ್ಕೆ ಶಾಯಿ ಬಳಿಯಲಾಗಿತ್ತು.