3 ದಿನಗಳೊಳಗೆ ಕಮಲ ಹಾಸನ್ ಕ್ಷಮೆ ಕೇಳಬೇಕು: ಪ್ರಣವಾನಂದ ಸ್ವಾಮೀಜಿ ಆಗ್ರಹ

ಹಿಂದೂ ಧಾರ್ಮಿಕ ಗ್ರಂಥವಾದ ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ದಕ್ಷಿಣ ಭಾರತದ ನಟ ಕಮಲ್ ಹಾಸನ್ ಮೂರು ದಿನಗಳೊಳಗೆ ಕ್ಷಮೆ ...
ಕಮಲ ಹಾಸನ್ ಮತ್ತು ಪ್ರಣವಾನಂದ ಸ್ವಾಮಿಜಿ
ಕಮಲ ಹಾಸನ್ ಮತ್ತು ಪ್ರಣವಾನಂದ ಸ್ವಾಮಿಜಿ
Updated on

ಬೆಂಗಳೂರು: ಹಿಂದೂ ಧಾರ್ಮಿಕ ಗ್ರಂಥವಾದ ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ದಕ್ಷಿಣ ಭಾರತದ ನಟ ಕಮಲ್ ಹಾಸನ್ ಮೂರು ದಿನಗಳೊಳಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೇ ಮುಂದಿನ ಕಾನೂನು ಹೋರಾಟ ಎದುರಿಸಲು ಸಿದ್ದರಾಗಲಿ ಎಂದು ಪ್ರಣವಾನಂದ ಸ್ವಾಮೀಜಿ  ಆಗ್ರಹಿಸಿದ್ದಾರೆ.

ಟಿ.ವಿ ಚಾನೆಲ್ ವೊಂದರ ಸಂದರ್ಶನದ ವೇಳೆ ವೈಯಕ್ತಿಕ ಲಾಭಕ್ಕಾಗಿ ಮಹಾಭಾರತದಲ್ಲಿ ಹೆಣ್ಣನ್ನು ಜೂಜಿಗಿಡಲಾಗಿತ್ತು. ಇಂಥಹ ಗ್ರಂಥಗಳನ್ನು ನಾವು ನಂಬಬೇಕಾ ಎಂದು ಕಮಲ್ ಹಾಸನ್ ಖಾಸಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಪ್ರಣವಾನಂದ ಸ್ವಾಮೀಜಿ, ಈ ಹಿಂದೆಯೂ ಕಮಲ ಹಾಸನ್ ತಮ್ಮ ಹೇಳಿಕೆಗಳಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರಿಗೆ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ಹೀಗಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಕಮಲ್ ಹಾಸನ್ ಅವಹೇಳನಕಾರಿ ಹೇಳಿಕೆಯನ್ನು ಖಂಡಿರುವ ಪ್ರಣವಾನಂದ ಸ್ವಾಮೀಜಿ  ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com