ಹಾಸನ: ಕಲ್ಲುಕ್ವಾರಿಯಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟ; ಮೂವರ ಸಾವು

ಕಲ್ಲುಕ್ವಾರಿಯೊಂದರಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತಂದೆ, ಮಗ ಸೇರಿದಂತೆ ಮೂವರು ಮೃತಪಟ್ಟ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಾಸನ: ಕಲ್ಲುಕ್ವಾರಿಯೊಂದರಲ್ಲಿ ಸಿಡಿಲು ಬಡಿದು ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತಂದೆ, ಮಗ ಸೇರಿದಂತೆ ಮೂವರು ಮೃತಪಟ್ಟ ದಾರುಣ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯ ಬಳಿ ಸೋಮವಾರ ತಡ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಸಿಡಿಲಿನ ‌ರಭಸಕ್ಕೆ ಕಲ್ಲು ಕ್ವಾರಿಯಲ್ಲಿ ಬಂಡೆ ಸ್ಫೋಟಿಸಲು ಇಡಲಾಗಿದ್ದ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಕಾರ್ಮಿಕರಾದ ಜಗದೀಶ(50) ಮತ್ತು ಅವರ ಪುತ್ರ ಪುನೀತ್‌(23) ಹಾಗೂ ಮತ್ತೊಬ್ಬ ಕಾರ್ಮಿಕ ನಾಗ(40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಫೋಟಕ ಒಮ್ಮೆಲೆ ಸಿಡಿದ ಪರಿಣಾಮವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 
ಸಿಡಿಲು ಬಂಡೆಯಲ್ಲಿ ಇಟ್ಟ ಸ್ಫೋಟಕ ಸಾಮಗ್ರಿಗೆ ಬಡಿದಿದ್ದೇ ಅವಘಡಕ್ಕೆ ಕಾರಣವೆಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com