ಭಾನುವಾರ ಸಂಜೆ ಆನೆಕಲ್ ನ ಕಾರ್ಪುರ್ ಗೇಟ್ ನಲ್ಲಿ ಬಾಲಕನಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು, ಅಸ್ಸಾಂ ಮೂಲದ ವಲಸೆ ಕಾರ್ಮಿಕನಾಗಿದ್ದ ಬಾಲಕನ ತಂದೆ ಬಾಲಕನನ್ನು ಕೂಡಲೇ ಆನೇರಲ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾನೆ, ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿದ್ದಾದ್ದಾಗಿ ಘೋಷಿಸಿದರು. ಹೀಗಾಗಿ ಬಾಲಕನ ತಂದೆ ಮಗುವಿನ ಶವವನ್ನು ಬೇಕ್ ನಲ್ಲಿ ಸಾಗಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಆಸ್ಪತ್ರೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.