ವಿಧಾನಸಭೆಯ ಮೊದಲ ಮಹಡಿಯಲ್ಲಿ ರವೀಂದ್ರನಾಥ್ ಠಾಗೂರ್ ಅವರ ಫೋಟೋ ಇದ್ದು, ಬಾಂಕ್ವೆಟ್ ಹಾಲ್ ನಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಕೃಷ್ಣಮೂರ್ತಿ, ರಂಗಾಚಾರ್ಲು ಹಾಗೂ ಇನ್ನಿತರ ಗಣ್ಯರ ಚಿತ್ರಗಳನ್ನು ಹಾಕಲಾಗಿದೆ. ಗಣ್ಯರ ಚಿತ್ರಗಳೊಂದಿಗೆ ಕೆಆರ್ ಎಸ್ ಗಾರ್ಡನ್, ಶಿವನ ಸಮುದ್ರ ಜಲಪಾತ, ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಇನ್ನಿತರ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನೂ ಹಾಕಲಾಗಿದ್ದು, ದಶಕಗಳ ಕಳಪೆ ನಿರ್ವಹಣೆಯಿಂದ ಈ ಚಿತ್ರಗಳೆಲ್ಲವೂ ಕಳೆಗುಂದಿದೆ ಎಂದು ವಿಧಾನಸಭೆಯ ಅಧಿಕರಿಯೊಬ್ಬರು ತಿಳಿಸಿದ್ದಾರೆ.