ಕೆಂಗೇರಿಯಲ್ಲಿರುವ ಮಾಯಸಂದ್ರ ಕೆರೆ -1 ಹಾಗೂ ಕೆರೆ-2 ನ್ನು ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಈಗ ಕಾಂಕ್ರೀಟ್ ತ್ಯಾಜ್ಯ ಸುರಿಯಲಾಗುತ್ತಿರುವ ಕೆರೆ-1 ಸಂಪೂರ್ಣ ಒಣಗಿಹೋಗಿದೆ. ಈ ಬಗ್ಗೆ ಕೆಎಲ್ ಸಿಡಿಎ ಸಿಇಒ ವಿದ್ಯಾಸಾಗರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಬೆಂಗಳೂರು ನಗರ ವಿಭಾಗದ ಡಿಸಿಎಫ್ ಗೆ ಕ್ರಮ ಕೈಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.