ಮಹಿಳೆಯ ಕೆರೆಯ ದಡಕ್ಕೆ ತಂದ ಸಿಬ್ಬಂದಿ ಆಕೆ ಉಸಿರಾಡುತ್ತಿರುವುದನ್ನು ಗಮನಿಸಿ ಆಂಬುಲೆನ್ಸ್ ಗೆ ಕರೆ ಮಾಡಿದರೇ ಬರುವುದು ತಡವಾಗುತ್ತದೆ ಎಂದು ಯೋಚಿಸಿದ ಪೊಲೀಸರು ಹೊಯ್ಸಳ ಕಾರಿನಲ್ಲಿ ಆಕೆಯನ್ನು ಹತ್ತಿರದ ಸಕ್ರ ವರ್ಲ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾದಮ್ಮ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ.