ಶಿವಮೊಗ್ಗ ಕಾರಾಗೃಹದಿಂದ ಬಾಂಗ್ಲಾ ಕೈದಿ ಪರಾರಿ: ನಾಲ್ಕು ವಾರ್ಡನ್ ಗಳ ಅಮಾನತು

ಜಿಲ್ಲಾ ಕಾರಾಗೃಹದಿಂದ ಬಾಂಗ್ಲಾ ಮೂಲದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಪ್ರಕರಣದ ಸಂಬಂಧ ಶಿವಮೊಗ್ಗ ಕಾರಾಗೃಹದ ನಾಲ್ವರು ವಾರ್ಡನ್ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿವಮೊಗ್ಗ:  ಜಿಲ್ಲಾ ಕಾರಾಗೃಹದಿಂದ ಬಾಂಗ್ಲಾ ಮೂಲದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಪ್ರಕರಣದ ಸಂಬಂಧ ಶಿವಮೊಗ್ಗ ಕಾರಾಗೃಹದ ನಾಲ್ವರು ವಾರ್ಡನ್ ಗಳನ್ನು ಅಮಾನತು ಮಾಡಲಾಗಿದೆ.
ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಜೈಲಿನ ಪ್ರಧಾನ ವಾರ್ಡನ್ ಗಳಾದ ಜಿ.ಎಂ ಮಹೇಶ್, ಎ.ಎಸ್ ಕೌತರ್, ಮತ್ತು ಮುಖ್ಯ ವಾರ್ಡನ್ ಗಳಾದ ಆರ್ ಎಂ ಪಾಟೀಲ್ ಮತ್ತು ನಂದೀಶ್ ಅವರನ್ನು ಅಮಾನತುಗೊಳಿಸಿದ್ದಾರೆ. 
ಬಾಂಗ್ಲಾದೇಶ ಮೂಲದ ಮೊಹಮ್ಮದ್ ರೆಹಮಾನ್ ಹುಸೇನ್ (25) ಎಂಬಾತ ಭಾನುವಾರ ಕಾರಾಗೃಹದಿಂದ ಪರಾರಿಯಾಗಿದ್ದ. ಬೆಂಗಳೂರಿನ ಹೆಚ್ಚುವರಿ ಐಜಿಪಿ ವೀರಭದ್ರಸ್ವಾಮಿ ಹಾಗೂ ಬಂದೀಖಾನೆ ಉತ್ತರ ವಲಯದ ಡಿಐಜಿ ಶೇಷ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜೈಲು ಗೋಡೆಗಳಿಂದ ಹಾರಿ, ಆತ ಪರಾರಿಯಾಗಿರುವ ಸಾಧ್ಯತೆ ಕಡಿಮೆ. ಮುಖ್ಯ ದ್ವಾರದಿಂದಲೇ ಆತ ಓಡಿಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮರಿಗೌಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com