ಖ್ಯಾತ ತಬಲ ವಾದಕ ಪಂ.ರಘುನಾಥ ನಾಕೋಡ್ ಗೆ  ಬಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರ
ಖ್ಯಾತ ತಬಲ ವಾದಕ ಪಂ.ರಘುನಾಥ ನಾಕೋಡ್ ಗೆ ಬಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರ

ರಾಷ್ಟ್ರೀಯ ಪ್ರಶಸ್ತಿ ಪ್ರಕಟ, ಖ್ಯಾತ ತಬಲ ವಾದಕ ಪಂ.ರಘುನಾಥ ನಾಕೋಡ್ ಗೆ ಬಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರ

ಹುಬ್ಬಳ್ಳಿಯ ಖ್ಯಾತ ತಬಲ ವಾದಕ ಪಂ.ರಘುನಾಥ ನಾಕೋಡ್ 2017ನೇ ಸಾಲಿನ ಬಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ
ಬೆಂಗಳೂರು: ಹುಬ್ಬಳ್ಳಿಯ ಖ್ಯಾತ ತಬಲ ವಾದಕ ಪಂ.ರಘುನಾಥ ನಾಕೋಡ್ 2017ನೇ ಸಾಲಿನ ಬಿ.ಚೌಡಯ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ
ಇದೇ ವೇಳೆ ರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ ಹುಬ್ಬಳ್ಳಿಯ ಥೆರೆಸಮ್ಮ ಡಿಸೋಜಾ, ರು ಈ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕಗೊಂಡಿದ್ದಾರೆ.  ಖ್ಯಾತ ಚಲನಚಿತ್ರ ನಿರ್ದೇಶಕ  ಎಂ.ಎಸ್‌. ಸತ್ಯು ಬಿ.ವಿ. ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರಿನ ನಂದಿನಿ ಈಶ್ವರ್ ಪ್ರಸಕ್ತ ಸಾಲಿನ ಶಾಂತಲಾ ನಾಟ್ಯ ಪ್ರಶಸ್ತಿ ಪಡೆದಿದ್ದಾರೆ.
ಗುಬ್ಬಿ ವೀರಣ್ಣ ಪ್ರಶಸ್ತಿ ಮತ್ತು ಉಳಿದೆರಡು ಪ್ರಶಸ್ತಿಗಳೂ ತಲಾ 5 ಲಕ್ಷ ನಗದು ಪುರಸ್ಕಾರವನ್ನು ಒಳಗೊಂಡಿವೆ.
ರಘುನಾಥ್ ನಾಕೋಡ್ 
ಹುಬ್ಬಳ್ಳಿಯ ಸಂಗೀತಗಾರರ ಮನೆತನದಲ್ಲಿ. ಹುಟ್ಟಿದ ರಾಷ್ಟ್ರ ಮಟ್ಟದ ತಬಲಾ ವಾದಕರಾದ ರಘುನಾಥ್ ನಾಕೋಡ್ ತಂದೆ ಪಂ. ಅರ್ಜುನ್ ಸಾ. ನಾಕೋಡ್ ಹಿಂದೂಸ್ತಾನಿ ಸಂಗೀತಗಾರರು, ತಾಯಿ ಅನಸೂಯಾ ನಾಕೋಡ್. 
ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಬಳಿಕ  ತಂದೆಯಿಂದಲೇ ಸಂಗೀತ ಪಾಠ ಪ್ರಾರಂಭಿಸಿದ  ರಘುನಾಥ್ ತಾಳ, ಲಯಗಳನ್ನು ಕಲಿತು ವೀರಣ್ಣ ಕಾಮಕ್‌ರ್, ಬಸವರಾಜ ಬೆಂಡಿಗೇರಿಯವರ ಬಳಿ ವಿದ್ಯಾಭ್ಯಾಸ ಮುಂದುವರಿಸಿದರು. ಹತ್ತನೇ ವಯಸ್ಸಿನಲ್ಲಿ ತಂದೆಯ ಸಂಗೀತಕ್ಕೆ ಸಾಥ್ ನೀಡಿದ್ದ ರಘುನಾಥ್  ಹೈದರಾಬಾದಿನ ಉಸ್ತಾದ ಶೇಖ್‌ದಾವೂದ್, ಇವರ ಮಗ ಶಬ್ಬೀರ್ ದಾವೂದ್, ಗುರುಬಂಧು ನಂದಕುಮಾರ ಮುಂತಾದವರ ಬಳಿ ಶಿಕ್ಷಣ ಪಡೆದರು
ಮಂಗಳೂರಿನ ಆಕಾಶವಾಣಿ ಕಲಾವಿದರಾಗಿ ಸೇರಿದ ಇವರು ಆಕಾಶವಾಣಿಯ ಎ ಟಾಪ್ ಶ್ರೇಣಿಯ ತಬಲಾ ವಾದಕರಾದರು. ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿಯೂ ಸಾಕಷ್ಟು ಸೇವೆ ಸಲ್ಲಿಸಿದ್ದ ಇವರು  ರಾಷ್ಟ್ರೀಯ, ಅಂತರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಖ್ಯಾತ ಸಂಗೀತಗಾರರಿಗೆ ತಬಲಾ ಸಾಥ್ ನೀಡಿದ್ದಾರೆ. ಲಂಡನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ. ಫ್ರಾನ್ಸ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ ತಬಲಾ ಸಾಥಿಯಾಗಿದ್ದ ಇವರು ಪಂ. ಪುಟ್ಟರಾಜ ಗವಾಯಿಗಲು, ಪಂ. ಸೋಮನಾಥ ಮರಡೂರ, ಪಂ. ವೆಂಕಟೇಶ್ ಕುಮಾರ್, ಪಂ. ರಾಜೀವ್ ತಾರಾನಾಥ್, ಡಾ. ಗಂಗೂಬಾಯಿ ಹಾನಗಲ್, ಉಸ್ತಾದ್ ಬಾಲೇಖಾನ್, ಉಸ್ತಾದ್ ಶಾಹಿದ್ ಪರವೇಜ (ಸಿತಾರ ವಾದಕರು) ಇನ್ನೂ ಹಲವರಿಗೆ ತಬಲಾ ಸಾಥ್ ನೀಡಿದ್ದಾರೆ.
ರಘುನಾಥ್, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ತ್ಯಾಗರಾಜ ಸಮಿತಿಯಿಂದ ಸಂಗೀತಕಲಾ ತಪಸ್ವಿ, ಧಾರವಾಡದ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದಿಂದ ತಾಳ-ಲಯ-ಕಣ್ಮಣಿ,ಇದೇ ನಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ
ಥೆರೆಸಮ್ಮ ಡಿಸೋಜಾ, 
1934ರಲ್ಲಿ ಹಾಸನದ ಅರಸೀಕೆರೆ ತಾಲೂಕು ಬೊಮ್ಮನಹಳ್ಳಿಯ ಬಡ ಕುಟುಂಬ ಒಂದರಲ್ಲಿ ಜನಿಸಿದ ಇವರು, 15ನೇ ವಯಸ್ಸಿನಲ್ಲಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಗುಬ್ಬಿ ವೀರಣ್ಣರ  ಮಾರ್ಗದರ್ಶನದೊಂದಿಗೆ ರಂಗಭೂಮಿಯಲ್ಲಿ ಪಳಗಿದ ಇವರು ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದರು. ಯಾತ ಕಲಾವಿದರಾದ ರಂಗನಾಯಕಮ್ಮ, ರಾಧಾರುಕ್ಮಿಣಿ, ಮಾಲತಮ್ಮ, ಸಂಪಿಗೆ ಶಂಕ್ರಣ್ಣ, ಬೇಬಣ್ಣ (ಚೋಮ) ಇವರೇ ಮೊದಲಾದ ಕಲಾವಿದರೊಡನೆ ಅಭಿನಯಿಸಿದ ಥೆರೆಸಮ್ಮ ಮಿನುಗುತಾರೆ ಮಿತ್ರ ಮಂಡಳಿ, , ಸೂಳ್ಯಾದ ದೇಸಾಯಿಯವರ ಕಂಪನಿಗಳಲ್ಲಿ ಅಭಿನಯ ನೀಡಿದ್ದರು.
ಪಟ್ಟಣ್ಣ ಕಣಗಾಲ್ ನಿರ್ದೇಶನದ ಪಡವಾರಳ್ಳಿ ಪಾಂಡವರು, ಅಮೃತಘಳಿಗೆ, ಚಂದ್ರಶೇಖರ ಕಂಬಾರರ ಹರಕೆ, ಕರಿಮಾಯಿ, ಹುಲಿಯಹೆಜ್ಜೆ, ನೆಂಟರು ಗಂಟುಕಳ್ಳರು ಮುಂತಾದ 60ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಥೆರೆಸಮ್ಮ  ನಟಿಸಿದ್ದಾರೆ.  ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘವನ್ನು 1985ರಲ್ಲಿ  ಸ್ಥಾಪಿಸಿದ ಇವರು ಇದರ ಮೂಲಕ  ಆಸಕ್ತ ಯುವಕ ಯುವತಿಯರಿಗೆ ಉಚಿತ ರಂಗಭೂಮಿ ತರಬೇತಿ ನೀಡುತ್ತಿದ್ದಾರೆ. 
ಎಂ.ಎಸ್. ಸತ್ಯು
1930 ಜುಲೈ 06ರಂದು ಮೈಸೂರಿನಲ್ಲಿ ಜನಿಸಿದ ಎಂ.ಎಸ್. ಸತ್ಯು ತಂದೆ ಎಂ. ಆರ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಲಲಿತಮ್ಮ. ಸತ್ಯು ಅವರ ಪೂರ್ಣ ಹೆಸರು ಸತ್ಯನಾರಾಯಣ.
ಮುಂಬಯಿನ ಚೇತನ್ ಆನಂದ್ ಬಳಿ ಸಹಾಯಕರಾಗಿ ಕೆಲಸ ಮಾಡಿ ಹಕೀಕತ್ ಚಿತ್ರದ ಕಲಾ ನಿರ್ದೇಶನಕ್ಕಾಗಿ 1964ರ ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದ ಇವರು  ಕಲಾ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾ ಲೇಖಕ, ನಿರ್ಮಾಪಕ, ನಿರ್ದೇಶಕರಾಗಿ ವಿವಿಧ ಘಟ್ಟಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ ಇದುವರೆಗೆ 15ಕ್ಕೂ ಅಧಿಕ ಸಾಕ್ಷ್ಮಚಿತ್ರ, 25ಕ್ಕೂ ಅಧಿಕ ಜಾಹೀರಾತು ಚಿತ್ರ, ಹಿಂದಿ, ಉರ್ದು, ಕನ್ನಡದಲ್ಲಿ ಎಂಟು ಪೂರ್ಣ ಪ್ರಮಾಣದ ಚಲನಚಿತ್ರಗಳಲ್ಲಿ ಸತ್ಯು ಅಭಿನಯ ನೀಡಿದ್ದಾರೆ.
ನಂದಿನಿ ಈಶ್ವರ್
ನಂದಿನಿ ಈಶ್ವರ್, ಕಲಾವಂತ ಕುಟುಂಬದಲ್ಲಿ ಜನಿಸಿದವರು. 1947 ರ ಆಗಸ್ಟ್ 7ರಂದು ಜನಿಸಿದ ನಂದಿನಿ  ತಂದೆ, ಎಮ್. ಎಸ್. ಶ್ರಿಕಂಥಯ್ಯ,, ತಾಯಿ, ಎಮ್. ಎಸ್. ಶಾಂತಮ್ಮ ರವರ ಪ್ರೋತ್ಸಾಹದಿಂದ ಬಾಲ್ಯದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿದರು. ಮೈಸೂರು ವಿಶ್ವವಿದ್ಯಾಲಯದ ಬಿ. ಎಸ್. ಸಿ. ಪದವಿ ಗಳಿಸಿದ ಇವರು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ, ಎಮ್. ಎ. ಪದವಿ ಹೊಂದಿದರು. ಡಾ.ಕೆ. ವೆಂಕಟಲಕ್ಷಮ್ಮ, ಲಲಿತ ದೊರೈ, ಮೈಸೂರಿನ ವೈ ಎನ್. ಸಿಂಹ, ಮೊದಲಾದ ದಿಗ್ಗಜರಿಂದ 'ಭರತನಾಟ್ಯ ನೃತ್ಯವಿದ್ಯೆ 'ಕಲಿತರು. ತದನಂತರ 'ದೆಹಲಿಯ ಗಂಧರ್ವ ಮಹಾ ವಿದ್ಯಾಲಯ'ದ 'ತೀರ್ಥರಾಮ್ ಆಜಾದ್' ರಿಂದ ಕಥಕ್ ನಾಟ್ಯವನ್ನೂ, ದೆಹಲಿ ಬ್ಯಾಲೆ ಗ್ರೂಪ್ ನಿರ್ದೇಶಕ 'ವಾಲ್ಮೀಕಿ ಬ್ಯಾನರ್ಜಿ'ಯವರಿಂದ ಮಣಿಪುರಿ ಮತ್ತು ಜಾನಪದ ನೃತ್ಯ, ಶೈಲಿಯನ್ನೂ 'ವೇದಾಂತಮ್ ಪ್ರಹ್ಲಾದ ಶರ್ಮ' ಮತ್ತು 'ವಸುಮತಿ ಗೋಪಾಲ ಕೃಷ್ಣಾ ಶರ್ಮ'ರಿಂದ ಕುಚಿಪುಡಿ ನಾಟ್ಯ ವನ್ನು ಕಲಿತರು.   'ಗುಜರಾತಿನ, ಹಿಮ್ಮತ್ ಸಿಂಹ ಚೌಹಾನ್ 'ರವರ ಸಾಭಿನಯವನ್ನು, ಮತ್ತು, ಎಮ್. ಜೆ. ಶ್ರೀನಿವಾಸಯ್ಯಂಗಾರ್ ರಿಂದ, ಎ. ಎಸ್. ಪದ್ಮರವರಿಂದ ವೀಣಾವಾದನವನ್ನೂ ಕಲಿತರು.
1980ರಲ್ಲಿ  'ರಾಸವೃಂದ ನಾಟ್ಯ ಶಾಲೆ'ಯನ್ನುಸ್ಥಾಪಿಸಿದ ನಂದಿನಿ  ನೂರಕ್ಕೂ ಹೆಚ್ಚು ಕಲಾವಿದರನ್ನು ತರಪೇತಿಗೊಳಿಸಿದ್ದಾರೆ.ಅವರ ಶಿಶ್ಯ-ಶಿಷ್ಯೆಯರು, 'ನೃತ್ಯ ನಾಟಕ'ಗಳನ್ನು ನಿರ್ದೇಶಿಸಿ ಹೆಸರುಗಳಿಸಿದ್ದಾರೆ. . ಮಗ, 'ವಿದ್ವಾನ್ ರೋಹಿತ್ ಈಶ್ವರ್' ಜೊತೆ ಹಲವಾರು ನೃತ್ಯ ರೂಪಕಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದಾರೆ. 'ಸೈನ್ಸ್ ಆಫ್ ಡಾನ್ಸ್ ; ಎಸ್ಸೆನ್ಸ್ ಆಫ್ ತ್ಯಾಗರಾಜಾಸ್ ಪಂಚರತ್ನ ಕೃತೀಸ್' ಎಂಬ ಜನಪ್ರಿಯ ಕಮ್ಮಟವನ್ನು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆಸಿಕೊಟ್ಟಿದ್ದಾರೆ
ಭಾರತೀಯ ನೃತ್ಯ ಶಾಸ್ತ್ರದ ಬೆಳವಣಿಗೆ'ಯ ಬಗ್ಗೆ ಹಲವಾರು ಸಂಶೋದನ ಪತ್ರಗಳನ್ನು ದೇಶವಿದೇಶಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ನಂದಿನಿಯವರು, ಭರತ ನಾಟ್ಯ, ಒಡಿಸ್ಸಿ, ಕಥಕ್, ನೃತ್ಯ ಪ್ರಕಾರಗಳ ಬಗ್ಗೆ ಹಲವಾರು ಕಾರ್ಯಾಗಾರಗಳನ್ನು ನಿಯಮಿತವಾಗಿ ತಮ್ಮ ರಾಸವೃಂದ ನಾಟ್ಯ ಶಾಲೆಯಲ್ಲಿ ನಡೆಸಿಕೊಂಡುಬರುತ್ತಿದ್ದಾರೆ

Related Stories

No stories found.

Advertisement

X
Kannada Prabha
www.kannadaprabha.com