ತಾನು ಕೆಪಿಎಸ್ ಸಿ 1993 ನೇ ಬ್ಯಾಚಿನ ಅಭ್ಯರ್ಥಿಯಾಗಿದ್ದು, ತನಗೆ ನೇಮಕಾತಿ ಆದೇಶ ಕೊಡದ ಕಾರಣ ಅನ್ಯಾಯವಾಗಿದೆ, ತನ್ನ ಉತ್ತರ ಪತ್ರಿಕೆಯನ್ನು ಕೆಪಿಎಸ್ಸಿ ಬದಲು ಮಾಡಿದೆ ಎಂದು ಆರೋಪಿಸಿದ್ದಾನೆ. ನಂತರ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ಆತನನ್ನು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಮೈಸೂರು ಮೂಲದ ಆತ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮಕ್ಕೆ ಕೀಟನಾಶಕದ ಬಾಟಲಿಯೊಂದಿಗೆ ಆಗಮಿಸಿದ್ದ.