ಮಂಗಳೂರು-ಬೆಂಗಳೂರು ರೈಲು: ಫೆ.10ರಿಂದ ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚಾರ

ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ.
ಮಂಗಳೂರು-ಬೆಂಗಳುರು ರೈಲು
ಮಂಗಳೂರು-ಬೆಂಗಳುರು ರೈಲು
Updated on
ಬೆಂಗಳೂರು: ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ. ವಾರದಲ್ಲಿ 4 ದಿನ ಯಶವಂತಪುರ–ಶ್ರವಣಬೆಳಗೊಳ ಮಾರ್ಗ ಹಾಗೂ 3 ದಿನ ಮೈಸೂರು ಮಾರ್ಗದಲ್ಲಿ ರೈಲು ಸಂಚಾರ ನಡೆಸಲಿದೆ. ಮುಂದಿನ ವರ್ಷದ ಫೆ.10ರಿಂದ ಈ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ.
ಇದಾಗಳೇ ಸಿದ್ದಗೊಂಡಿರುವ ಯಶವಂತಪುರ–ಶ್ರವಣಬೆಳಗೊಳ ಮಾರ್ಗದಿಂದಾಗಿ ರಾಜಧಾನಿಯಿಂದ ಮಂಗಳೂರಿಗೆ ತಲುಪುವ ಒಟ್ಟು ಸಂಚಾರ ಅವಧಿ 3 ಗಂಟೆಗಳಷ್ಟು ತಗ್ಗಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ನಿಲ್ದಾಣದಲ್ಲಿ ನಿಂತು ಮಂಗಳೂರು ತಲುಪಲಿದ್ದು, ಅಲ್ಲಿಂದ ಮುಂದೆ ಕಾರವಾರ ಹಾಗೂ ಕಣ್ಣುರಿನತ್ತ ಸಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು-ಮಂಗಳೂರು ರೈಲಿನ ನೂತನ ವೇಳಾಪಟ್ಟಿ ಹೀಗಿದೆ- ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.15ಕ್ಕೆ ಹೊರಟು ಮರುದಿನ ಬೆಳಗ್ಗೆ 6.20ಕ್ಕೆ ಮಂಗಳೂರು ಸೇರಲಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com