ಶ್ರೀಪ್ರಿಯ, ಸೌಂದರ್ಯ ನಾಗರಾಜ್, ಸುಷ್ಮಾ ನಂಜುಂಡ ಸ್ವಾಮಿ ಅಭಿನಯಿಸಲಿದ್ದಾರೆ. ಸಂಬಂಧಗಳು ಕಾಲದ ಗತಿಗೆ ಸಿಲುಕಿ ತಿರುವುಗಳನ್ನು ಪಡೆದು ಯಾವ ರೀತಿ ಬದಲಾವಣೆ ಕಾಣುತ್ತವೆ ಎಂಬುದನ್ನು ತಿಳಿಸುವುದೇ ನಾಟಕದ ಕಥಾಹಂದರವಾಗಿದೆ. ವಿನೂತನ ನಾಟಕಕ್ಕೆ ಮಧು ಎಸ್.ಎಸ್, ಕಿಶನ್ ನಾಗರಾಜ್ ಸಂಗೀತ ನೀಡಿದ್ದಾರೆ. ತನ್ನ ವಿಭಿನ್ನ, ವಿಶಿಷ್ಟ ಸಮಕಾಲೀನ ನಾಟಕಗಳಾದ ನಮ್ಮ ಮೆಟ್ರೋ, ಮಾಗಡಿ ಡೇಸ್, ಪಿ.ಎಸ್ ಐ ಡೋಂಟ್ ಲವ್ ಯು, ಕಾಕ್.ಟೇಲ್, ‘E=MC2’ ಮುಂತಾದ ಕನ್ನಡ ಮತ್ತು ಇಂಗ್ಲೀಷ್ ನಾಟಕಗಳ ಮೂಲಕ ವಿಮೂವ್ ಥೀಯೇಟರ್ ತಂಡವು ಜನಪ್ರಿಒಯತೆ ಗಳಿಸಿದೆ. ’ಸಂಬಂಧಗಳ ಸುತ್ತ’ ಎಂಬ ಹೊಸ ಕನ್ನಡ ನಾಟಕವನ್ನು ಮೊದಲ ಬಾರಿಗೆ ಪ್ರದರ್ಶಿಸುತ್ತಿದೆ.