ಕಲಬುರ್ಗಿ: ಟಂಟಂ-ಕಾರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು, ಐವರಿಗೆ ಗಾಯ

ಕಾರ್ ಮತ್ತು ಟಂಟಂ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸತ್ತು ಐವರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪೂರದಲ್ಲಿ ನಡೆದಿದೆ.
ಕಲಬುರ್ಗಿ: ಟಂಟಂ-ಕಾರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು, ಐವರಿಗೆ ಗಾಯ
ಕಲಬುರ್ಗಿ: ಟಂಟಂ-ಕಾರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು, ಐವರಿಗೆ ಗಾಯ
Updated on
ಕಲಬುರ್ಗಿ: ಕಾರ್ ಮತ್ತು ಟಂಟಂ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸತ್ತು ಐವರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪೂರದಲ್ಲಿ ನಡೆದಿದೆ. ಅಫಜಲಪೂರನ ಚವಡಾಪೂರ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು ಟಂಟಂನಲ್ಲಿದ್ದ  ಈರಯ್ಯ(34)  ಮತ್ತು ಮಹೇಶ ಶೆಟ್ಟಿ (36)  ಸಾವನ್ನಪ್ಪಿದ್ದಾರೆ. 
ಇನ್ನು ಇದೇ ಘಟನೆಯಲ್ಲಿ ಗಾಯಗೊಂಡ ಐವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ ಕಲಬುರ್ಗಿಯಿಂದ ಚಿನ್ಮಯಗಿರಿ ದೇವಸ್ಥಾನದ ಜಾತ್ರೆಗೆ ಹೊರಟಿದ್ದ ಸಮಯ ಈ ಅವಘಡ ಸಂಭವಿಸಿದ್ದು ಪ್ರಕರಣ ಸಂಬಂಧ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com