ಕಲಬುರ್ಗಿ: ಕಾರ್ ಮತ್ತು ಟಂಟಂ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸತ್ತು ಐವರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪೂರದಲ್ಲಿ ನಡೆದಿದೆ. ಅಫಜಲಪೂರನ ಚವಡಾಪೂರ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು ಟಂಟಂನಲ್ಲಿದ್ದ ಈರಯ್ಯ(34) ಮತ್ತು ಮಹೇಶ ಶೆಟ್ಟಿ (36) ಸಾವನ್ನಪ್ಪಿದ್ದಾರೆ.
ಇನ್ನು ಇದೇ ಘಟನೆಯಲ್ಲಿ ಗಾಯಗೊಂಡ ಐವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ ಕಲಬುರ್ಗಿಯಿಂದ ಚಿನ್ಮಯಗಿರಿ ದೇವಸ್ಥಾನದ ಜಾತ್ರೆಗೆ ಹೊರಟಿದ್ದ ಸಮಯ ಈ ಅವಘಡ ಸಂಭವಿಸಿದ್ದು ಪ್ರಕರಣ ಸಂಬಂಧ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.