ರಾಣಿಬೆನ್ನೂರು: ಹಲಗೇರಿ ಬಳಿ ಭೀಕರ ಅಪಘಾತ, ಆರು ಸಾವು

ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ, ಸ್ಥಳದಲ್ಲೇ ಆರು ಮಂದಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಹಲಗೇರಿ ಬಳಿ ನಡೆದಿದೆ.
ರಾಣಿಬೆನ್ನೂರು: ಹಲಗೇರಿ ಬಳಿ ಭೀಕರ ಅಪಘಾತ, ಆರು ಸಾವು
ರಾಣಿಬೆನ್ನೂರು: ಹಲಗೇರಿ ಬಳಿ ಭೀಕರ ಅಪಘಾತ, ಆರು ಸಾವು
ರಾಣಿಬೆನ್ನೂರು: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ, ಸ್ಥಳದಲ್ಲೇ ಆರು ಮಂದಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಹಲಗೇರಿ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
ನಾಗರಾಜ ಪೂಜಾರ(24), ನಾಗಮ್ಮ(35), ಗೌರಮ್ಮ(38), ಪೂರ್ಣಿಮಾ(21), ಗಂಗಮ್ಮ(37), ನಾಗಮ್ಮ(39) ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ. 
ಮೃತರು ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ, ಮಾಕನೂರು ಮತ್ತು ಕೋಡಿಯಾಲ ಗ್ರಾಮಸ್ಥರು  ಎನ್ನಲಾಗಿದ್ದು ಹುಟ್ಟು ಹಬ್ಬಕ್ಕೆಂದು ಸಿಗಂಧೂರಿಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವಾಗ ಈ ಭೀಕರ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂದವರನ್ನು ರಾಣಿಬೆನ್ನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಹಲಗೇರಿ ಪೋಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com