ಬೆಂಗಳೂರು: ಕಾಲೇಜು ಟಾಯ್ಲೆಟ್ ನಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ

ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನ ಶೌಚಾಲಯ ಒಂದರಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನ ಶೌಚಾಲಯ ಒಂದರಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. 
ಚೈತನ್ಯ ಟೆಕ್ನಾಲಜಿ ಸ್ಕೂಲ್​ಮತ್ತು ಕಾಲೇಜನ ಶೌಚಾಲಯದಲ್ಲಿ ವಿದ್ಯಾರ್ಥಿಯ ಮೃತತದೇಹ ದೊರಕಿದ್ದು ಮೃತ ವಿದ್ಯಾರ್ಥಿಯನ್ನು ದ್ವಿತೀಯ ಪಿಯು ನ  ಸಾರ್ಥಕ್ ಪುರಾಣಿಕ್ ಎಂದು ಗುರುತಿಸಲಾಗಿದೆ.
ಶ್ರೀಕಾಂತ್ ಪುರಾಣಿಕ್ ಹಾಗೂ ಸುಚೇತ್ರ ದಂಪತಿಯ ಪುತ್ರ ಸಾರ್ಥಕ್​ ಪುರಾಣಿಕ್ ಸಾವಿಗೀದಾಗಿದ್ದು ಧಾರವಾಡ ಮೂಲದ ಈತ ಕಳೆದ ಎರಡು ವರ್ಷಗಳಿಂದ ಹಾಸ್ಟೆಲ್ ನಲ್ಲಿ ವಾಸವಿದ್ದನೆನ್ನಲಾಗಿದೆ.ಶೌಚಾಲಯಕ್ಕೆ ತೆರಳಿದ್ದ ಸಾರ್ಥಕ್ ಮತ್ತೆ ಮರಳದ ಕಾರನ ಗಾಬರಿಗೊಂಡ ಸಹಪಾಠಿಗಳು ಶೌಚಾಲಯದ ಬಳಿ ತೆರಳಿ ಬಾಗಿಲು ಬಡಿದಿದ್ದಾರೆ. ಆದರೆ ಒಅಳಗಿನಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ.
ನಂತರ ಹಾಸ್ಟೆಲ್ ಸಿಬ್ಬಂದಿ ನೆರವು ಪಡೆದ ವಿದ್ಯಾರ್ಥಿಗಳು ಕಿಟಕಿಯಿಂದ ನೋಡಿದಾಗ, ಟಾಯ್ಲೆಟ್ಟಿನಲ್ಲಿ ಸಾರ್ಥಕ್ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಹಾಸ್ಟೆಲ್ ಸಿಬ್ಬಂದಿಗಳು ಬಾಗಿಲು ಒಡೆದು, ಸಾರ್ಥಕ್ ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತರುವುದಕ್ಕೂ ಮುನ್ನವೇ ಸಾರ್ಥಕ್ ಮೃತಪಟ್ಟಿದ್ದನೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬೆಳ್ಳಂದೂರು ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com