ಬೆಂಗಳೂರು: ನೀವು ಕರ್ನಾಟಕ ಸರ್ಕಾರದಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಯನ್ನು ಹಿಡಿದಿಡಲು ಇಂಜಿನಿಯರಿಂಗ್ ಆಗಬೇಕೆನ್ನುವುದು ಕಡ್ಡಾಯವಲ್ಲ. ಇಂಜಿನಿಯರ್ ಅಲ್ಲದ ವ್ಯಕ್ತಿ ಕೂಡ ಕಿರಿಯ ಅಧೀಕ್ಷಕರಾಗಬಹುದು. ಪಿಡಬ್ಲ್ಯೂಡಿ ಮತ್ತು ಜಲ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ 54 ಮುಖ್ಯ ಇಂಜಿನಿಯರು ಗಳಲ್ಲಿ ಇಬ್ಬರು ತಾಂತ್ರಿಕೇತರ ಶಿಕ್ಷಣ ಪಡೆದು ಬಂದವರು. ಈ ಮಾಹಿತಿಯನ್ನು ಸರ್ಕಾರದ ಮೂಲಗಳು ಎಕ್ಸ್ ಪ್ರೆಸ್ ಗೆ ತಿಳಿಸಿವೆ, ಒಬ್ಬರು ರಾಜ್ಯ ಹಣಕಾಸು ಇಲಾಖೆಯಿಂದ ಇಲ್ಲಿಗೆ ವರ್ಗವಾಗಿದ್ದರೆ, ಇನ್ನೊಬ್ಬರು ಕೃಷಿ ಇಲಾಖೆಯಿಂದ ಬಂದಿದ್ದಾರೆ. ಇದೀಗ ಅವರಲ್ಲಿ ಒಬ್ಬರು , ಪಿಡಬ್ಲ್ಯೂಡಿ ಯ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಖ್ಯ ಇಂಜಿನಿಯರ್ ನ ಉಸ್ತುವಾರಿ ವಹಿಸಿಕೊಂಡಿದ್ದರೆ,, ಇನ್ನೋರ್ವರು ಜಲ ಸಂಪನ್ಮೂಲ ಇಲಾಖೆಯ ಕಮಾಂಡಿಂಗ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಿಇಯ ಇನ್-ಚಾರ್ಜ್ ಆಗಿದ್ದಾರೆ.