ಯಾರೋ ನನ್ನನ್ನು ಅಟ್ಟಾಡಿಸಿಕೊಂಡು ಬಂದರು. ತಪ್ಪಿಸಿಕೊಳ್ಳಲು ಕೊಟ್ಟಿಗೆಗೆ ಬಂದು ಅವಿತುಕೊಂಡೆ’ ಎಂದು ರಮೇಶ್ ಪದೇ ಪದೇ ಬೇಡಿಕೊಂಡಿದ್ದಾನೆ, ಆದರೆ ಆತನ ಮಾತಿಗೆ ಬೆಲೆ ಕೊಡದ ಗ್ರಾಮಸ್ಥರು ಆತನನ್ನು ಥಳಿಸಿದ್ದಾರೆ. ನಂತರ ರಮೇಶ್ ಕುಸಿದು ಬಿದ್ದಿದ್ದಾನೆ. ಆತ ಸಾವನ್ನಪ್ಪಿರುವುದು ತಿಳಿದು ಬಂದಿದೆ,. ರಮೇಶ್ ಸಹೋದರ ರಾಜು ಚಂದ್ರಶೇಖರ್ ಮತ್ತು ಕೆಂಪರಾಜು ಎಂಬುವವರ ವಿರುದ್ಧ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.