ಬೆಂಗಳೂರು: ಬರಗಾಲದ ಬವಣೆ ಬಳಿಕ ಸುರಿದ ಮಳೆ ರಾಜ್ಯದ ಜನರಲ್ಲಿ ನಿಜಕ್ಕೂ ಸಂತಸ ತಂದಿದೆ. ಆದಾಗ್ಯೂ, ಈ ಮಳೆಯೇ ಹಲವರ ಜೀವಹಾನಿಗೂ ಕಾರಣವಾಗಿರುವುದು ವಿಪರ್ಯಾಸ. ಮಳೆ ಮತ್ತು ಸಿಡಿಲಿನ ಆರ್ಭಟದ ಕಾರಣ ಇದುವರೆಗೂ ರಾಜ್ಯದಲ್ಲಿ 75 ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಮಳೆಯ ಕಾರಣಕ್ಕೆ ಮೈಸೂರಿನಲ್ಲಿ ಗರಿಷ್ಠ ಮಟ್ಟದಲ್ಲಿ ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಒಟ್ಟು 12 ಮಂದಿ ಅಸು ನೀಗಿದ್ದಾರೆ. ಇನ್ನು , ಹಾವೇರಿ (7), ಧಾರವಾಡ ಮತ್ತು ಕಲಬುರಗಿ (6) ಪ್ರಾಣ ಕಳೆದುಕೊಂಡಿದ್ದಾರೆ.